Thursday, July 21, 2016

ಶ್ರೀ ಪಡ್ರೆಯವರಿಂದ ಪ್ರಶಸ್ತಿ ಸ್ವೀಕಾರ

ನಿನ್ನೆ (20-7-2016) ತಿರುವನಂತಪುರದಲ್ಲಿ ಜರುಗಿದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಕೇರಳ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಇವರಿಂದ ಪ್ರಶಸ್ತಿ ಸ್ವೀಕರಿಸಿದ ಕ್ಷಣ.

Wednesday, July 20, 2016

ಹಲಸಿನ ಕಾರ್ಯಾಗಾರ


ತಿರುವನಂತಪುರದಲ್ಲಿ ಇಂದು ಹಲಸಿನ ಕಾರ್ಯಾಗಾರ. ಜಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮದ ಆಯೋಜನೆ. ಸಂಜೆ ಶ್ರೀ ಪಡ್ರೆಯವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ.

Tuesday, July 19, 2016

ಶ್ರೀ ಪಡ್ರೆಯವರೀಗ - 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ'


        ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಿರುವನಂತಪುರದ ಜ್ಯಾಕ್ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಗಳು ಪ್ರಶಸ್ತಿಯ ಆಯೋಜಕರು
         ಶ್ರೀ ಪಡ್ರೆಯವರು ಹಲಸಿನ ಆಂದೋಳನಕ್ಕೆ ಶ್ರೀಕಾರ ಬರೆದವರು. 2009ರಂದೀಚೆಗೆ 'ಅಡಿಕೆ ಪತ್ರಿಕೆ'ಯಲ್ಲಿ ದೇಶ, ವಿದೇಶದ ಹಲಸಿನ ಆಗು ಹೋಗುಗಳ ತಾಜಾ ಲೇಖನಗಳು ಪ್ರಕಟ. ವಿಶ್ವಾದ್ಯಂತ ಹಲಸು ಪ್ರೇಮಿಗಳೊಂದಿಗೆ ನಿರಂತರ ಸಂಪರ್ಕ, ಜಾಲತಾಣ ಗುಂಪುಗಳ ರೂಪೀಕರಣ. ಹಲಸು ಮೇಳಗಳಲ್ಲಿ 'ಹಲಸಿನ ವಿಶ್ವದರ್ಶನ' ಪ್ರಸ್ತುತಿ. ಹಲಸು ಮೇಳಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ.
     ಈಗ ಶ್ರೀ ಪಡ್ರೆಯವರಿಗೆ 'ಹಲಸಿನ ಆಂತಾರಾಷ್ಟ್ರೀಯ ರಾಯಭಾರಿ' ಪ್ರಶಸ್ತಿ.