Monday, June 30, 2014

ಅನಾಥ ಹಣ್ಣಿನ ಮಾನ ವರ್ಧಿಸಿದ ಉಪಕುಲಪತಿ



              ಡಾ.ಗೌಡರ ಪ್ರೇರಣೆಯ ರೀತಿ - ಹಲಸಿಗಾಗಿ ದುಡಿದವರಿಗೆ ಗೌರವ. ಡಾ.ಹಿತ್ತಲಮನಿಯವರಿಗೆ 
                              ಈಚೆಗೆಅಂತಾರಾಷ್ತ್ರೀಯ ಹಲಸು ಸಮ್ಮೇಳನದಲ್ಲಿ  ಸಂಮಾನ.


             ಡಾ.ನಾರಾಯಣ ಗೌಡ

            ಕಳೆದೊಂದು ದಶಕದಿಂದ ಅನಾಥ ಹಣ್ಣು ಹಲಸನ್ನು ಜನಪ್ರಿಯವನ್ನಾಗಿಸಲು ಸಾಕಷ್ಟು ಕೃಷಿಕ ಯತ್ನಗಳು  ನಡೆದಿವೆ.  ಈ ನಡುವೆ ಅದಕ್ಕೊಂದು ರಾಷ್ಟ್ರೀಯ ಮಾನ ತಂದು ಕೊಡುವ ಕೆಲಸವೂ ಸದ್ದಿಲ್ಲದೆ ನಡೆದಿದೆ.  ಹಲಸು ಮತ್ತದರ ಮೌಲ್ಯವರ್ಧನೆಯತ್ತ ಗಂಭೀರ ಶ್ರಮವಹಿಸಿರುವ ದೇಶದ ಎರಡೇ ಎರಡು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮೊದಲಿಗ ಮತ್ತು ದೊಡ್ಡಣ್ಣ. ಎರಡನೆಯದು ಮಹಾರಾಷ್ಟ್ರದ ದಾಪೋಲಿಯ ಬೀಯೆಸ್ ಕೇಕೇವಿ ಕೃವಿವಿ.
           2009. ಆಗ ಡಾ.ನಾರಾಯಣ ಗೌಡರು ಬೆಂಗಳೂರು ಕೃಷಿ ವಿವಿಯ ಹಿರಿಯ ಪ್ರಾಧ್ಯಾಪಕರಾಗಿದ್ದರು. ಕೃಷಿಕರ ಆದಾಯವರ್ಧನೆ ಮಾಡುವ ಯೋಜನೆಯೊಂದು ಅವರ ಹೆಗಲೇರಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬುಗೆರೆ ಹೋಬಳಿಯಲ್ಲಿ ಓಡಾಡುತ್ತಿದ್ದರು. ಹಸಿದಾಗ ತಿನ್ನಲು ಅಲ್ಲಿನ ರೈತರು ಹಲಸಿನ ಹಣ್ಣಿನ ಸೊಳೆ ಕೊಟ್ಟರು. ಅದರ ಸ್ವಾದಕ್ಕೆ ವಿವಿ ತಂಡವಿಡೀ ಮಾರುಹೋಯಿತು.
               ಇದಕ್ಕೆ ಎಷ್ಟು ಬೆಲೆ ಸಿಗುತ್ತೆ. ವರುಷಕ್ಕೆ ಏನು ಆದಾಯ ಬರುತ್ತೆ?  - ಇವರು ಪ್ರಶ್ನಿಸಿದರು. ಉತ್ತರ ಕೇಳಿದ ವಿವಿ ವಿಜ್ಞಾನಿಗಳು ದಂಗಾದರು. ಮಧ್ಯವರ್ತಿಗಳ ಕೈಯಲ್ಲಿ ಹಲಸಿನ ಮಾರುಕಟ್ಟೆ ನಲುಗಿತ್ತು. ರೈತರು ಚಿಕ್ಕಾಸು ದರದಲ್ಲೇ ತೃಪ್ತಿ ಪಡಬೇಕಿತ್ತು. ಏನಾದರೂ ಮಾಡಲೇಬೇಕು ಅನಿಸಿತು ಡಾ.ಗೌಡ ನೇತೃತ್ವದ ತಂಡಕ್ಕೆ. ಹಲಸಿಗೆ ವ್ಯವಸ್ಥಿತ ಮಾರುಕಟ್ಟೆ ಸೃಷ್ಟಿಯಾಗಬೇಕಾದ ಅನಿವಾರ್ಯತೆಯನ್ನು  ಇವರು ಸವಾಲಾಗಿ ಸ್ವೀಕರಿಸಿದರು.
              ಸಂಘಟಿತ ಮಾರುಕಟ್ಟೆ ರೂಪಿಸಿದರಷ್ಟೇ ರೈತರಿಗೆ ಒಳ್ಳೆ ಬೆಲೆ ಸಿಕ್ಕೀತು ಎನ್ನುವುದು ಇವರ ವಿಶ್ವಾಸ.  ಯೋಜನೆಯ ಮೂಲೋದ್ದೇಶದಲ್ಲಿ ಇಲ್ಲದ 'ಹಲಸು ಅಭಿವೃದ್ಧಿ'ಯನ್ನು ತನ್ನ ಸಾತ್ವಿಕ ಒತ್ತಡದ ಮೂಲಕ ಸೇರಿಸುವುದರಲ್ಲಿ ಡಾ.ಗೌಡ ಸಫಲರಾದರು. ಕೆಲವೇ ತಿಂಗಳುಗಳಲ್ಲಿ ದೇಶದ ಏಕೈಕ ಹಲಸು ಬೆಳೆಗಾರರ ಸಂಘ ತೂಬುಗೆರೆಯಲ್ಲಿ ಹುಟ್ಟಿತು. ಹಾಲು ಸೊಸೈಟಿಗಳ ಮೂಲಕ ಹಲಸಿನ ಹಣ್ಣು ಸಂಗ್ರಹಿಸಿ ಹಾಪ್ಕಾಮ್ಸ್ ಮಳಿಗೆಗಳಿಗೆ ಪೂರೈಸುವ ಸರಪಳಿ ಕೊಂಡಿ ಸೃಷ್ಟಿಯಾಯಿತು. ತಗೊಳ್ಳಿ, ರೈತರಿಗೆ ಹೆಚ್ಚಿನ ಬೆಲೆ ಸಿಗಲು ಶುರುವಾಯಿತು. 
             ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಯಿತು. ಹಲಸಿನ ಹಣ್ಣಿನ ತಾಜಾ ತೊಳೆ ಬಿಡಿಸಿ ನೇರವಾಗಿ ಗ್ರಾಹಕರಿಗೆ ಮಾರಲು ರೈತರನ್ನು ಪ್ರೇರೇಪಿಸಿದರು. ಇದಕ್ಕಾಗಿಯೇ ಪ್ರತ್ಯೇಕವಾಗಿ ಲಾಲ್ಬಾಗಿನಲ್ಲಿ ಹಲಸಿನ ಮೇಳಗಳ ಆಯೋಜನೆ. ಪಟ್ಟಣದಲ್ಲಿ 'ರೆಡಿ ಟು ಈಟ್' ರೂಪದಲ್ಲಿ ಸೊಳೆ ಕೊಟ್ಟಾಗ ಕೊಳ್ಳುಗರು ಮುಗಿಬೀಳುತ್ತಾರೆ. ತೂಬುಗೆರೆ ರೈತರಿಗೆ ತಮ್ಮ ಹಲಸಿಗೆ ನ್ಯಾಯಬೆಲೆ ಪಡೆಯುವ ಹೊಸದಾರಿ ಹೀಗೆ ಸೃಷ್ಟಿಯಾಯಿತು. ಎಲ್ಲಾ ಚಟುವಟಿಕೆಗಳಿಂದ ತೂಬುಗೆರೆ ಹಲಸು ಇನ್ನಷ್ಟು ಪ್ರಚಾರ ಪಡೆಯಿತು. ಖ್ಯಾತ ಕೃಷಿ ಮಾಸಿಕ 'ಅಡಿಕೆ ಪತ್ರಿಕೆ'ಯು 2009ರಲ್ಲಿ ಈ ಯಶೋಗಾಥೆಯನ್ನು ಮುಖಪುಟದಲ್ಲಿ ಬಿತ್ತರಿಸಿತು.
                ನೇರ ಮಾರಾಟದ ಪರಿ ಕಂಡು ಮಧ್ಯವರ್ತಿಗಳು ಮೆತ್ತಗಾದರೂ. ತಾವೇ ಹೆಚ್ಚಿನ ದರ ಕೊಡಲು ಮುಂದಾದರು. ಆದರೆ ಇಷ್ಟರಲ್ಲಿ ತೂಬುಗೆರೆ ರೈತರಿಗೆ ಹಲಸಿನ ನೈಜ ಬೆಲೆ ಮತ್ತದನ್ನು ಪಡೆಯುವ ದಾರಿ ನಿಚ್ಚಳವಾಗಿತ್ತು.
ತೂಬುಗೆರೆ ಹಲಸಿನ ಹಣ್ಣು ತಿಂದರೆ ಇನ್ನೂ ಬೇಕೆಂಬಷ್ಟು ರುಚಿ. ಇಲ್ಲಿ ಹತ್ತಕ್ಕೆ ಎರಡು ಯಾ ಮೂರು ಮರದ ಹಣ್ಣುಗಳು ಕೆಂಪು ವರ್ಣದವು. ಕೆಂಪು ಸೊಳೆ ಗ್ರಾಹಕರನ್ನು ಥಟ್ಟೆಂದು ಸೆಳೆಯುತ್ತದೆ. ತೂಬುಗೆರೆ ರೈತರು ಮಾರಾಟಕ್ಕೆ ಹೋದಲ್ಲೆಲ್ಲಾ ಕೆಂಪು ಹಣ್ಣು ವಿಶೇಷ ಆಕರ್ಷಣೆ.  ತೊಳೆ ಬಿಡಿಸಿ ಒಂದು ಹಣ್ಣಿನಿಂದ ಈ ಮಂದಿ 400-1000 ರೂಪಾಯಿ ವರೆಗೂ ಗಳಿಸುತ್ತಾರೆ. "2008ರಲ್ಲಿ ತೂಬುಗೆರೆ ಹೋಬಳಿಯಲ್ಲಿ ಹಲಸಿನಿಂದ ವರುಷಕ್ಕೆ ಮೂರು ಲಕ್ಷ ರೂಪಾಯಿ ಆದಾಯ ತರುತ್ತಿತ್ತು. ಈಗದು ಇಪ್ಪತ್ತೆಂಟು ಲಕ್ಷಕ್ಕೆ ಏರಿದೆ. ನಾವು ಖುಷಿಯಾಗಿದ್ದೇವೆ," ನೆನೆಯುತ್ತಾರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್.
                   2010ರಲ್ಲಿ ನಾರಾಯಣ ಗೌಡರು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಹಲಸಿನ ಕುರಿತು ಇಟ್ಟುಕೊಂಡಿದ್ದ ಯೋಜನೆಗಳು ಗರಿಗೆದರಿದುವು. 2010ರಲ್ಲಿ ಕೃಷಿ ವಿವಿಯಲ್ಲಿ ಹಲಸು ವಿಚಾರಸಂಕಿರಣ ನಡೆಯಿತು. ಈ ವರುಷ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತಾರಾಷ್ಟ್ರೀಯ ಹಲಸು ಸಮ್ಮೇಳನ ನಡೆಸಿದರು. ಸಮುದಾಯ ಕಡೆಗಣಿಸಿದ ಅದ್ಭುತ ಹಣ್ಣನ್ನು ಈ ವಿವಿಯ ಕುಲಪತಿ ಹೆಮ್ಮೆಯಿಂದ ಹೆಗಲಿಗೇರಿಸಿಟ್ಟೇ ನಡೆದರು.
                  ಕೇಂದ್ರದ ಜೀವತಾಂತ್ರಿಕ ವಿಭಾಗದ ನಾಲ್ಕೂವರೆ ಕೋಟಿ ರೂಪಾಯಿ ಅನುದಾನದ ಹಲಸಿನ ಮೌಲ್ಯವರ್ಧನೆಯ ಯೋಜನೆಗೆ ಈಗ ಬೆಂಗಳೂರು ಕೃಷಿ ವಿವಿ ಸಾರಥಿ. ಈ ಯೋಜನೆಯಡಿ ಹಲಸಿನ ಕೆಲವು ಭರವಸೆಯ ಉತ್ಪನ್ನಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಉಪಕುಲಪತಿಗಳು ತೆರೆಮರೆಯಲ್ಲಿದ್ದೇ ಇಂಥ ಹಲವು ಚಟುವಟಿಕೆಗಳನ್ನು ಯೋಜಿಸಿ ಸಾಕಾರಗೊಳಿಸಿದ್ದಾರೆ.
                 ಈಚೆಗೆ, ಜೂನ್ 24ರಂದು, ಇನ್ನೊಂದು ದೂರದೃಷ್ಟಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.  ಬೆಂಗಳೂರು ಕೃವಿವಿ ವಿಜ್ಞಾನಿ - ಆಹಾರ ಉದ್ಯಮಿಗಳ ಮುಖಾಮುಖಿ. ಪಾಲ್ಗೊಂಡವರಿಗೆಲ್ಲಾ ಹಲಸಿನ ವಿನೂತನ ಉತ್ಪನ್ನಗಳ ರುಚಿ ತೋರಿಸಿ, 'ಈ ಉತ್ಪನ್ನಗಳ ವಾಣಿಜ್ಯ ಮಟ್ಟದ ತಯಾರಿಗೆ ಮುಂದೆ ಬನ್ನಿ' ಎನ್ನುವ ವಿನಂತಿ. ಮಾಹಿತಿ ಪಡೆದ ಉದ್ದಿಮೆದಾರರು ಹಲಸನ್ನೂ ಮುಂದೆ ಉದ್ದಿಮೆಯಲ್ಲಿ ಸೇರಿಸಿಕೊಳ್ಳುವ ಉತ್ಸಾಹ ತೋರಿಸಿದ್ದಾರೆ.
                ತೂಬುಗೆರೆ ರೈತ ಸಮುದಾಯ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವನ್ನು, ಈ ಕುಲಪತಿಗಳನ್ನು ಮರೆಯುವಂತೆಯೇ ಇಲ್ಲ. ಅವರು ಹಲಸನ್ನು ಹೆಸರಾಗಿಸಿದವರು. ಆ ಮೂಲಕ ನಮ್ಮೂರಿಗೆ ಭಾಗ್ಯ ತಂದು ಕೊಟ್ರು - ಇದು ರವಿಕುಮಾರರ ಮನದಾಳದ ಮಾತು. ಈ ರೈತಸ್ನೇಹಿ ಉಪಕುಲಪತಿ ಇಂದು ತಮ್ಮ ಸ್ಥಾನದಿಂದ ವಿರಮಿಸುತ್ತಾರೆ.
ಇವರು ಅನಾಥ ಹಣ್ಣೊಂದನ್ನು ಸ್ವಯಂಪ್ರೇರಿತರಾಗಿ ಮೇಲೆತ್ತಿ ಅದಕ್ಕೆ ಮಾನ, ಬೆಳೆಗಾರರಿಗೆ ವರಮಾನ ತಂದುಕೊಟ್ಟ ಉಪಕುಲಪತಿ. ಈ ಕೊಡುಗೆಯನ್ನು ಚರಿತ್ರೆ ಮರೆಯದು. ಈ ವರೆಗಿನ ಅವರ ಹಲಸು ಪ್ರೀತಿಯ ಗಾಢತೆ ನೋಡಿದರೆ, ನಿವೃತ್ತರಾದರೂ ಅವರು ಹಲಸನ್ನು ಕೆಳಗಿಳಿಸರು!
                   ಕೃಷಿ ವಿಶ್ವವಿದ್ಯಾನಿಲಯವೊಂದು ದೃಢ ಸಂಕಲ್ಪ ಮಾಡಿದರೆ ರೈತ ಸಮುದಾಯದ ಬದುಕಿನಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಹುದು ನೋಡಿ. ನಾವುಗಳು ನಿರ್ಲಕ್ಷಿಸಿದ ಕಲ್ಪವೃಕ್ಷ, ಅರ್ಥಾತ್ ಹಲಸಿನ ಬೆಳೆಗಾರರೆಲ್ಲರ ಪರವಾಗಿ ಡಾ. ನಾರಾಯಣ ಗೌಡರಿಗೆ ಇದೋ ಹೃತ್ಪೂರ್ವಕ ಸಲಾಂ.

Saturday, June 28, 2014

ಕಾರ್ಕಳ ಹಲಸು ಮೇಳ


 ವೇದಿಕೆ ಮುಂದೆ ಹಲಸಿನ ಅಲಂಕಾರ
 ಸಾಣೂರು ಶಂಕರ ಪ್ರಭುಗಳ ಕೈರುಚಿ - ಹಹ ಕೇಸರಿಬಾತ್

                                  ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಮಳಿಗೆಯಲ್ಲಿ ಹತ್ತಾರು ಉತ್ಪನ್ನಗಳು.

                                                   ಸ್ಥಳದಲ್ಲೇ ವಿವಿಧ ತಿಂಡಿಗಳ ತಯಾರಿ

ತೋಟಗಾರಿಕಾ ಮಹಾವಿದ್ಯಾಲಯದ ತಯಾರಿ. ಡೆಮೋ ಓನ್ಲಿ!

ಇಂದು (28-6-204) ಕಾರ್ಕಳದಲ್ಲಿ ಹಲಸು ಮೇಳ ಜರುಗಿತ್ತು. ಮೇಳದ ಮಾರಾಟ ಮಳಿಗೆಯಲ್ಲಿ 'ರೆಡಿ ಟು ಸರ್ವ್' ಉತ್ಪನ್ನಗಳು ಮೇಳದ ಹೈಲೈಟ್. ಸ್ಥಳದಲ್ಲೇ ಸಿದ್ಧಗೊಳಿಸಿದ ಉತ್ಪನ್ನಕ್ಕೆ ಕೊಳ್ಳುಗರು ಧಾರಾಳ. ಹಲಸಿನ ಚಿಪ್ಸಿನಿಂದ ಪೇಯದ ತನಕ ವಿವಿಧ ಉತ್ಪನ್ನಗಳು. ಕಾಸರಗೋಡು ಕೆ.ವಿ.ಕೆ.ಯವರ ಮಳಿಗೆಯಲ್ಲಿ ಉತ್ಪನ್ನಗಳ ವೈವಿಧ್ಯತೆ. ಮಹಿಳಾ ಗುಂಪುಗಳಿಗೆ ತರಬೇತಿ ನೀಡಿ ಉತ್ಪನ್ನಗಳನ್ನು ತಯಾರಿಸಿದ ಕೆವಿಕೆಯ ಆಹಾರ ವಿಭಾಗ ಉಳಿಕೆ ಕೆವಿಕೆಗಳಿಗೆ ಮಾದರಿ. ಸಾಣೂರಿನ ಶಂಕರ ಪ್ರಭುಗಳ ಮಳಿಗೆಯಲ್ಲಿ ಹಹ ಜ್ಯೂಸ್, ಹಲ್ವ, ಕೇಸರಿಬಾತ್, ಗಟ್ಟಿ., ಶಿರಸಿಯ ಕದಂಬದ ಮಳಿಗೆ, ಶಿರಸಿ ತೋಟಗಾರಿಕಾ ವಿದ್ಯಾಲಯದ ಮಳಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಘಟಕಗಳ ಮಳಿಗೆ..ಗಳಲ್ಲಿ ಆಹಾರ ವೈವಿಧ್ಯ. ಪ್ರಾಯಃ ಇದುವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಜರುಗಿದ ಹಲಸು ಮೇಳಗಳಲ್ಲಿ ಮಳಿಗೆಗಳು 'ಲೈವ್' ಆಗಿ ಇದ್ದಿರುವುದು ಇದು ಮೊದಲೇನೋ!

Wednesday, June 25, 2014

FKCCI to hold a meet to popularize Jackfruit Value Addition



Participants in Face to Face between Scientists and Food Processors on 
Jackfruit Value Addition at UAS Blore



Jackfruit Ice-Cream



Products displayed in the meet



Ready To Cook Tender Jackfruit has very high potential

 Jack Seed Flour

“ It is good that UAS has come out with so many value added products from Jackfruit. FKCCI is ready to host a meeting in near future to introduce all the Jackfruit products to the country through the media”, said Shri R.Shivakumar, President of Federation of Karnataka Chambers of Commerce and Industry (FKCCI).He was addressing the ‘Research-Industry Interface Meet on Jackfruit Value Added Products” organized by University of Agriculture Sciences, Bangalore at their North Block Conference Hall, GKVK on Tuesday, June 24th.
          Dr K Narayana Gowda, Vice-Chancellor, UAS Bangalore who presided over the meet said “ bringing jackfruit marketing into organized structure and going for a variety of value additions are two best options for farmers to get fair price for Jackfruit.”
          Shri Ravikumar, Secretary of Toobugere Jack Growers Association recalled that after UAS Bangalore has organized them into the fold of  association, the hobli’s total income from Jackfruit has increased from Rs 3 lakh in 2008 to present 28 lakh Rupees.
          Dr. B. Ranganna, Dr. Shyamalamma of UAS Bangalore and ‘Shree’ Padre, Editor, Adike Patrike made presentations on Jackfruit value addition.
          The unique meet attracted Industry & farmer representatives not only from Karnataka, nut from Kerala  and  Karnataka too. All the participants were served with Jackfruit  Ice-Cream, Jackfruit Peda, Jackfruit Soft-drink, Jack seed powder Muffin and Jack Seed powder biscuit.
          Ready to Cook Tender Jackfruit to be sold as vegetable, a product of very high potential the production of which is standardized by UAS attracted high attention. A good number of participants showed interest to take up production of some of the show-cased jackfruit products.
          Among the important participants were Officers of  Kerala’s Milk Marketing giant - Co-operative Milk Marketing Federation (Milma), Shri Sharan Kumar, Managing Director, The Kerala Agro Industries Corporation Ltd (KAICO, A Kerala Govt Undertaking), Shri KB Udayakumar, Managing Director, Freshreach Retail & Growers Agri Reach (GAR), a Karnataka Company that markets 150 fruits and vegetables direct from farmers fields to different Super markets in Karnataka and Kerala and Shri Mahesh Patil, ZP Member from Kolhapur and a number of farmer enterpruners and small scale food processors.
          For more details on Jackfruit Value Added Products The Director of Research, UAS Bangalore 560065, Tel : +91 80 23330206 , E-mail   - drmashankar191212@gmail.com can be contacted.

(Photos : Shree Padre)