Tuesday, July 28, 2020

ನಾಂದ್ರೋಡು – ಇನ್ನು ನೆನಪು ಮಾತ್ರ


ಪ್ರಗತಿಪರ ಕೃಷಿಕ, ಹೊಸ ಯಂತ್ರಗಳ ಆವಿಷ್ಕಾರ, ಅಂಗಳದಲ್ಲಿ ಭತ್ತದ ಕೃಷಿ, ಅಕ್ಕಿ ಮಾಡುವ ಯಂತ್ರ, ನೇಜಿ ನೆಡುವ ಯಂತ್ರ, ಅಕ್ಕಿ ಶುಚಿ ಗೊಳಿಸುವ ಯಂತ್ರ,... ಹೀಗೆ ಅನೇಕ ಆವಿಷ್ಕಾರ ಮಾಡಿದ ಏತಡ್ಕದ ನಾಂದ್ರೋಡು ಮಹಾಲಿಂಗೇಶ್ವರ ಭಟ್ಟರು (86) ನಿಧನರಾದರು. ಕಾಲು ಶತಮಾನದ ಹಿಂದೆ ಹೊಳೆಯನ್ನು ದಾಟಲು ತೊಟ್ಟಿಲು ನಿರ್ಮಿಸಿ ಸುಲಭ ವಿಧಾನ ಮಾಡಿದ್ದರು. ಕಟ್ಟವನ್ನು ಮರದಲ್ಲಿ ನವೀನ ರೀತಿಯಲ್ಲಿ ನಿರ್ಮಿಸಿ ಕೃಷಿಕರಿಗೆ ಮಾರ್ಗದರ್ಶನ ಮಾಡಿದ್ದರು. ಅಂಗಳದಲ್ಲಿ ಸುವಾಸನೆ ಭರಿತ ಬಾಸ್ಮತಿ ಭತ್ತ ಬೆಳೆದವರು. ಪುತ್ತೂರಿನಲ್ಲಿ ಕಳೆದ ವರುಷ ಜರುಗಿದ ಯಂತ್ರಮೇಳದಲ್ಲಿ ಭಾಗವಹಿಸಿದಾಗ ‘ರೇಡಿಯೋ ಪಾಂಚಜನ್ಯ’ಕ್ಕೆ ಅವರನ್ನು ಸಂದರ್ಶನ ಮಾಡಿದ್ದೆ. ಅವರೊಬ್ಬ ‘ಭತ್ತದ ಬ್ಯಾಂಕ್’ ಆಗಿದ್ದರು. ಅಗಲಿದ ನಾಂದ್ರೋಡು ಅವರಿಗೆ ಭಾಷ್ಪಾಂಜಲಿ.
(ಚಿತ್ರ : ವೇಣು ಕಳೆಯತ್ತೋಡಿ)

0 comments:

Post a Comment