


ಅಡಿಕೆ ಪತ್ರಿಕೆಯು ಅಕ್ಟೋಬರ್ 2009ರ ಸಂಚಿಕೆಯಲ್ಲಿ 'ಕ್ಷೀರೋದ್ಯಮದಲ್ಲೊಂದು ಶಾರ್ಟ್ ಕಟ್ - ಕನ್ನಾಡಿ ಫ್ರೆಶ್' ಎಂಬ ಬರೆಹವನ್ನು ಪ್ರಕಟಿಸಿತ್ತು. ಕನ್ನಾಡಿ ಪಂಚಾಯತಿನ ಕಾರ್ಯವನ್ನು ವೀಕ್ಷಿಸಿಲು ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆಯವರ ನೇತೃತ್ವದಲ್ಲಿ - ಕರ್ನಾಟಕ ಸಾವಯವ ಮಿಶನ್ ಅಧ್ಯಕ್ಷ ಡಾ.ಆ.ಶ್ರೀ.ಆನಂದ್, ರಾಜಶೇಖರ್ ಸಿಂಧೂರ್, ಪೆಲತ್ತಡ್ಕ ಶಿವಸುಬ್ರಹ್ಮಣ್ಯ,, ನಾ. ಕಾರಂತ ಪೆರಾಜೆ - ಇವರನ್ನೊಳಗೊಂಡ ತಂಡವು ಸೆಪ್ಟೆಂಬರ್ ೧೪, ೨೦೧೦ ರಂದು ಕನ್ನಾಡಿಗೆ ಭೇಟಿ ನೀಡಿತ್ತು. ಕನ್ನಾಡಿ ಪಂಚಾಯತ್ ಅಧ್ಯಕ್ಷ ಎಸ್.ರಾಧಾಕೃಷ್ಣನ್, ಕನ್ನಾಡಿ ಫ್ರೆಶ್ಸನ್ನು ಹೆಗಲಿಗೇರಿಸಿಕೊಂಡ ಡಾ.ದಿನೇಶ್ ಮತ್ತು ಸಾವಯವ ಕೃಷಿಕ ನಾರಾಯಣನ್.ಎ. ತಂಡದೊಂದಿಗೆ ಸಾಥ್ ನೀಡಿ ಮಾರ್ಗದರ್ಶನ ನೀಡಿದರು.
ಭೇಟಿಯ ಬಳಿಕ ಡಾ.ಆನಂದರ ಮನದಲ್ಲಿ ಕುಳಿತ ಪ್ರಶ್ನೆ - 'ಕನ್ನಾಡಿನಂತೆ ನಮ್ಮ ಕನ್ನಾಡಿನಲ್ಲೂ ಹಾಲಿನ ಇಂತಹ ವ್ಯವಸ್ಥೆ ಯಾಕೆ ಮಾಡಬಾರದು?'.
1 comments:
ಇಂತಹ ಪ್ರಯತ್ನಗಳು ಅನುಕರಣಿಯವಾಗಬೇಕು.
Post a Comment