Wednesday, December 1, 2010

ರಾಜೀವ್ ದೀಕ್ಷಿತ್ ನಿಧನ

ಅಝಾದಿ ಬಚಾವೋ ಆಂದೋಲನದ ಚಳವಳಿಕಾರ, ಸ್ವದೇಶಿ ಚಿಂತನೆಯ ಪ್ರಚಾರಕ ರಾಜೀವ್ ದೀಕ್ಷಿತ್ (44) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನರಾದರು.

ಉತ್ತರ ಪ್ರದೇಶದ ಆಲಿಗಡದಲ್ಲಿ ಜನನ. ಅಲಹಾಬಾದ್ನಲ್ಲಿ ಶಿಕ್ಷಣ ಪೂರ್ಣ. ಕಂಪ್ಯೂಟರ್ ಸೈನ್ಸ್ನಲ್ಲಿ ಬಿಎಸ್ಸಿ ಪದವಿ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ನಲ್ಲಿ ಬಿಟೆಕ್ ಪದವಿ, ಇಷ್ಟೆಲ್ಲಾ ಅಕಾಡಮಿಕ್ ಅರ್ಹತೆ ಇದ್ದರೂ, ದೀಕ್ಷಿತ್ ಉದ್ಯೋಗ ಕೈಬೀಸಿ ಕರೆಯಲಿಲ್ಲ.
ಸ್ವದೇಶಿ ಚಳವಳಿಯಲ್ಲಿ ಪೂರ್ಣಾವಧಿಯಾಗಿ ತೊಡಗಿಸಿಕೊಂಡ್ದಿದರು.
1992ರಲ್ಲಿ ಪ್ರೊ: ಧರ್ಮಪಾಲ್ಮತ್ತು ಡಾ.ಭನ್ವರ್ ಲಾಲ್ ಅವರ ಮಾರ್ಗದರ್ಶನದಲ್ಲಿ ಅಝಾದಿ ಬಚಾವೋ ಆಂದೋಲನ ಆರಂಭ. ಬ್ರಿಟನ್, ಫ್ರಾನ್ಸ್, ಜರ್ಮನಿ, ಹಾಲೆಂಡ್ನಂತಹ ಐರೋಪ್ಯ ರಾಷ್ಟ್ರಗಳಲ್ಲಿ ಸಂಚರಿಸಿ ಜನರ ರಾಷ್ಟ್ರಪ್ರೇಮದ ಅಧ್ಯಯನ. `ನಾವು ಕೂಡ ದೇಶ ಪ್ರೀತಿಸುವುದನ್ನು ಕಲಿಯೋಣ. ನಮ್ಮಲ್ಲಿ ಉತ್ಪಾದನೆಯಾಗುವುದನ್ನೇ ಬಳಸೋಣ. ಆ ಮೂಲಕ ಭಾರತವನ್ನು ಸ್ವಾವಲಂಬಿ ರಾಷ್ಟ್ರ ಮಾಡೋಣ. ಗಾಂಧಿಕನಸಿನ ಗ್ರಾಮರಾಜ್ಯ ಕಟ್ಟೋಣ' ಎಂದು ದೇಶದ ಜನರನ್ನು ತಮ್ಮ ವಾಗ್ಝರಿಯ ಮೂಲಕ ಬಡಿದೆಬ್ಬಿಸುತ್ತಿದ್ದರು.
ರಾಜ್ಯದ ಮಹಾನಗರ, ನಗರ, ಪಟ್ಟಣ ಅಷ್ಟೇ ಏಕೆ ಹಳ್ಳಿ ಹಳ್ಳಿಗಳಲ್ಲಿ ಓಡಾಟ. ಸ್ವದೇಶಿ ವಸ್ತುಗಳ ಬಗ್ಗೆ ಜಾಗೃತಿ. ಯುವಕರಲ್ಲಿ ಕೃಷಿ, ಪರಿಸರ, ಗ್ರಾಮೀಣಾಭಿವೃದ್ಧಿ, ವಾಣಿಜ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ, ರಾಷ್ಟ್ರಚಿಂತನೆಗೆ ಹಚ್ಚುವ ಕಾಯಕ.
ದೀಕ್ಷಿತ್ ಅವರ ಸ್ವದೇಶಿ ಚಳವಳಿಯ ಹರಿತವಾದ ಮಾತು, ಬಹುರಾಷ್ಟ್ರೀಯ ಕಂಪೆನಿಗಳು ಸಾಮಾನ್ಯ ಜನರಿಗೆ ಮಾಡುತ್ತಿರುವ ಮೋಸದ ವಿಶ್ಲೇಷಣೆಗಳು ಲಕ್ಷಾಂತರ ವಿಡಿಯೊ, ಆಡಿಯೊ ಕ್ಯಾಸೆಟ್ಗಳಾದವು. ಅವರ ಭಾಷಣಗಳು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಪುಸ್ತಕ ರೂಪ ಪಡೆದಿವೆ.

0 comments:

Post a Comment