Thursday, December 26, 2013

ವಾರಣಾಶಿ ಸುಬ್ರಾಯ ಭಟ್ ವಿಧಿವಶ






ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಶಿ ಸುಬ್ರಾಯ ಭಟ್ (87) ಇಂದು ಮುಂಜಾನೆ ವಿಧಿವಶರಾದರು. 70ರ ದಶಕದ ಆದಿಯಲ್ಲಿ ಅಡಿಕೆ ಮಾರುಕಟ್ಟೆ ಮತ್ತು ಅಡಿಕೆ ಕೃಷಿಕರು ಕಂಗೆಟ್ಟಾಗ ಕ್ಯಾಂಪ್ಕೋ ಸ್ಥಾಪನೆ. ಬಳಿಕ ಅಡಿಕೆ ಜತೆ ಕೊಕ್ಕೋ ಬೆಳೆಸಿ ಎಂದ ಭಟ್, 1986 ಸೆಪ್ಟೆಂಬರಿನಲ್ಲಿ ಪುತ್ತೂರು ಕೊಕ್ಕೋ ಚಾಕಲೇಟ್ ಫ್ಯಾಕ್ಟರಿ ಸ್ಥಾಪನೆ. ಸುಮಾರು ಹದಿನೇಳು ವರುಷ ಕ್ಯಾಂಪ್ಕೋವನ್ನು ಸುಬ್ರಾಯ ಭಟ್ಟರು ಮುನ್ನಡೆಸಿದ್ದರು. ಕಷ್ಟ-ಸುಖ, ಮಾನ-ಅಪಮಾನ, ಹೊಗಳಿಕೆ-ತೆಗಳಿಕೆಗಳನ್ನು ಸಮಭಾವದಿಂದ ಸ್ವೀಕರಿಸಿ, ಅಡಿಕೆ ಬೆಳೆಗಾರರ ಹಿತಕ್ಕಾಗಿ ಕಟ್ಟಿದ ಕ್ಯಾಂಪ್ಕೋ ಸಂಸ್ಥೆ ಇಂದು ರಾಷ್ಟ್ರ ಮಟ್ಟದ ಸಂಸ್ಥೆಯಾಗಿದೆ. ಭಟ್ಟರ ಕಲ್ಪನೆಯ ಸಂಸ್ಥೆಯು ತ್ರಿವಿಕ್ರಮನಾಗಿ ಬೆಳೆದುದರಲ್ಲಿ ಅವರಿಗೆ ಖುಷಿಯಿತ್ತು. ಅಗಲಿನ ಸುಬ್ರಾಯ ಭಟ್ಟರಿಗೆ ನುಡಿ ನಮನ.

0 comments:

Post a Comment