Sunday, February 8, 2009

'ಜಲಗಾಂವ್'ನಲ್ಲಿ ಒಂದು ದಿನ






`ಜೈನ್ ಇರಿಗೇಶನ್ ಸಿಸ್ಟಂ ಲಿ.,' ಇದರ ಕೇಂದ್ರ ಕಚೇರಿ ಮಹಾರಾಷ್ಟ್ರದ ಜಲಗಾಂವ್ ನಲ್ಲಿದೆ . ಪದ್ಮಶ್ರೀ ಪುರಸ್ಕೃತ ಭವರ್ಲಾಲ್ ಜೈನ್ ಇದರ ಸ್ಥಾಪಕರು. ಮೂವತ್ತು ವರುಷಗಳ ಹಿಂದೆ 'ಸರಕಾರವೂ ತಿರಸ್ಕರಿಸಿದ' ಭೂಮಿಯನ್ನು ಕೊಂಡು, ಅದರಲ್ಲಿ ಹಸಿರಿನ ತಾರಸೀಕರಣ ಮಾಡಿದರು. ನೀರಾವರಿಯ ಎಲ್ಲಾ ಸಾಧ್ಯತೆಗಳನ್ನು ಪ್ರಯೋಗಕ್ಕೆ ಒಡ್ಡಿ ಯಶ ಪಡೆದರು. ಪೈಪು, ಹನಿ ಮತ್ತು ತುಂತುರು ನೀರಾವರಿ ಉಪಕರಣಗಳು, ಶೀಟುಗಳು, ಹಣ್ಣುಗಳ ಸಂಸ್ಕರಣೆ, ಎರೆಗೊಬ್ಬರ, ಅಂಗಾಂಶ ಬಾಳೆ..ಹೀಗೆ ಒಂದೇ ಎರಡೇ! ನಿಜಾರ್ಥದಲ್ಲಿ 'ಅದ್ಭುತ' ಕೆಲಸ.

ಮೊನ್ನೆ ಜನವರಿ 28, 29ರಂದು ಜಲಗಾಂವ್ಗೆ ಕನ್ನಡ ಪತ್ರಕರ್ತರ 'ಎಕ್ಸ್ಪೋಶರ್' ಭೇಟಿ. ಒಂದು ದಿವಸದಲ್ಲಿ ಜೈನ್ ಅವರ ಸಾಧನೆಗಳ 'ಕಿಟಕಿ' ನೋಟ. ಬರುತ್ತಾ ಅಜಂತಾ, ಎಲ್ಲೋರಾ ಭೇಟಿ. ಔರಂಗಾಬಾದ್ನಿಂದ ಮುಂಬಯಿಗಾಗಿ ಬೆಂಗಳೂರಿಗೆ ವಿಮಾನ ಹಾರಿ ಬಂದ ತಂಡದ ಮುಂದಾಳ್ತನ -ಜೈನ್ ನ ಹಿರಿಯ ಕರ್ನಾಟಕದ ಅಧಿಕಾರಿ ಶ್ರೀ ಚಿದಂಬರ ಜೋಶಿ. ಜೊತೆಗೆ ಇನ್ನೊಬ್ಬ ಅಧಿಕಾರಿ ಆರ್. ಸರ್ವಟೆ.

0 comments:

Post a Comment