Wednesday, December 1, 2010

ಪುಟಾಣಿ ಸಂಶೋಧಕರಿಗೆ ರಾಷ್ಟ್ರೀಯ ಮನ್ನಣೆ


ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಸಿ.ಎಸ್.ಭಾರ್ಗವ ಮತ್ತು ಎನ್.ವಿ.ಪ್ರಮೋದ್ - ತಮ್ಮ ಪಠ್ಯ ಒಂದಂಗವಾಗಿ ಸಿದ್ಧಪಡಿಸಿದ ವಿಜ್ಞಾನ ಪ್ರಾಜೆಕ್ಟ್ ರಾಷ್ಟ್ರೀಯ ಮನ್ನಣೆ ಗಳಿಸಿದೆ. ಅಳಲೆಕಾಯಿ, ಕುಂಕುಮಕಾಯಿ, ಕಾಡುಗೇರು ಮತ್ತು ಶಂಖಪುಷ್ಪದಿಂದ ಶಾಯಿ ಸಿದ್ಧಪಡಿಸುವ ಪಾರ್ಮುಲಾವನ್ನು ಈ ವಿದ್ಯಾರ್ಥಿಗಳಿಬ್ಬರು ಸಿದ್ಧಪಡಿಸಿದ್ದರು.
ಈ ಪ್ರಾಜೆಕ್ಟನ್ನು - ಭಾರತ ಸರಕಾರದ ವಿಜ್ಞಾನ ಮ್ತು ತಂತ್ರಜ್ಞಾನ ಇಲಾಖೆ, ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಹಾಗೂ ಇಂಟೆಲ್ ಕಂಪೆನಿ ಸಹಯೋಗದಲ್ಲಿ - ಮುಂಬಯಿಯ ನೆಹರೂ ಸಯನ್ಸ್ ಸೆಂಟರ್ ನಲ್ಲಿ ಜರುಗಿದ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಪ್ರದರ್ಶಿಸಿ ಪ್ರಶಸ್ತಿವನ್ನು ಪಡೆದಿದ್ದಾರೆ. ಮುಂದಿನ ಮೇ ತಿಂಗಳಲ್ಲಿ ಅಮೆರಿಕಾದ ಲಾಸ್ ಎಂಜಲೀಸ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಅವಕಾಶ ಪ್ರಾಪ್ತವಾಗಿದೆ.
ವರ್ಲಿಯ ಮೇಳದಲ್ಲಿ ದಶದ ಸುಮಾರು 87 ತಂಡಗಳು ಭಾಗವಹಿಸಿದ್ದುವು. ಇದರಲ್ಲಿ ಅಂತಿಮವಾಗಿ ಎಂಟು ತಂಡಗಳು ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ ಒಂದು ಮಡಿಲ್ಗಣಕ (ಲ್ಯಾಪ್ ಟಾಪ್), ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ದೊರೆತಿದೆ.

ರಾಮಕೃಷ್ಣ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಎ.ವಸಂತಿ ಅವರ ಮಾರ್ಗದರ್ಶನ ಮತ್ತು ಮುಖ್ಯಗುರು ಎಚ್.ಶ್ರೀಧರ ರೈ ಇವರ ಗರಡಿಯಲ್ಲಿ ಪಳಗಿದ ಪ್ರಶಸ್ತಿ ಪುರಸ್ಕೃತ 'ಪುಟಾಣಿ ವಿಜ್ಞಾನಿ'ಗಳಾದ ಭಾರ್ಗವ ಮತ್ತು ಪ್ರಮೋದ್ಗೆ ಅಭಿನಂದನೆಗಳು

6 comments:

shivarampailoor said...

Congrats to Bhargav and Pramod. Pailoor

Unknown said...

ಶುಭಾಷಯಗಳು ಭಾರ್ಗವ ಹಾಗೂ ಪ್ರಮೋದರಿಗೆ...

PaLa said...

ಅಭಿನಂದನೆಗಳು ಕನ್ನಡ ಪುಟಾಣಿಗಳಿಗೆ..

ಓಂಶಿವಪ್ರಕಾಶ್ ಎಚ್. ಎಲ್ said...

ಅಭಿನಂದನೆಗಳು :)

Anonymous said...

congrats

Bhagyashree.manila said...

congrats

Post a Comment