Sunday, February 6, 2011

ಕೃಷಿಮೇಳ ಬಜಗೋಳಿ








ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಧರ್ಮಸ್ಥಳ ಇದರ 31ನೇ ಕೃಷಿ ಮೇಳವು ಉಡುಪಿ ಜಿಲ್ಲೆಯ ಬಜಗೋಳಿಯಲ್ಲಿ ಫೆ.4, 5 ಮತ್ತು 6ರಂದು ಜರುಗಿತು. ಪೂಜ್ಯ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆ. ಲಕ್ಷಾಂತರ ರೈತರ ಪಾಲುಗಾರಿಕೆ. ಚೊಕ್ಕ, ಶಿಸ್ತಿನ ವ್ಯವಸ್ಥೆ. ಸಮಾರೋಪ ಸಮಾರಂಭಕ್ಕೆ 'ನಮ್ಮ' ಮುಖ್ಯಮಂತ್ರಿ ಯಡ್ಯೂರಪ್ಪನವರ ಉಪಸ್ಥಿತಿ.

ರಾಷ್ಟ್ರೀಯ ಆಹಾರ ಭದ್ರತೆಗೆ ದಾರಿ - ಭತ್ತ ಬೇಸಾಯದ ಶ್ರೀ ಪದ್ಧತಿ, ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ವೀ ಮಾದರಿಗಳು, ಶ್ರೀಮತಿ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಹಿಳಾ ವಿಚಾರಗೋಷ್ಠಿ, ಸಾವಯವ ಕೃಷಿ ಮತ್ತು ಲಾಭದಾಯಕ ಹೈನುಗಾರಿಕೆ, ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಶನ್, ಸರಕಾರಿ ಅಧಿಕಾರಿಗಳೊಂದಿಗೆ ಸಂವಾದ, ಕೃಷಿ ಮತ್ತು ಮಾಧ್ಯಮ, ಘನತ್ಯಾಜ್ಯ ನಿರ್ವಹಣೆ ನಮ್ಮೆಲ್ಲರ ಹೊಣೆ, ಕೃಷಿ ಮತ್ತು ಯುವಜನತೆ:ಆಧುನಿಕ ಕೃಷಿಗೆ ಶಾಪವೇ? - ವಿಚಾರಗಳ ಕುರಿತು ಮೂರೂ ದಿನಗಳಲ್ಲಿ ಗೋಷ್ಠಿಗಳು ನಡೆದುವು.

ನಾಲ್ಕುನೂರಕ್ಕೂ ಮಿಕ್ಕಿ ಮಳಿಗೆಗಳಿದ್ದುವು. ಸಭಾಮಂಟಪದ ಸುತ್ತ ಅಡಿಕೆಮನೆ, ತರಕಾರಿಮನೆ, ತರಕಾರಿಗಳ ಪ್ರತಿಕೃತಿ, ಕುಲುಮೆ ಮನೆ, ಭತ್ತಕುಟ್ಟುವ ಕುಟೀರ, ನಾರಿನ ಹಗ್ಗದಿಂದ ರೂಪಿಸಿದ ಕೋಟಿಚೆನ್ನಯರ ಮತ್ತು ಪರಶುರಾಮ ಮೂರ್ತಿಗಳು, ಆಲೆಮನೆ, ಜಾನುವಾರು ಪ್ರದರ್ಶನ, ಕುಕ್ಕುಟ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು.

0 comments:

Post a Comment