Tuesday, July 1, 2014

ಹಲಸು ಸ್ನೇಹಿಗಳ ಸಮ್ಮಿಲನ

                                                               'sadananda' jack bulb
                                                        'Bhairachandra' jack bulb


                                                                      jackfruit cake

jack lowers group
             
 ಪುಣಚ(ದ.ಕ.)ದಲ್ಲಿ ಜೂನ್ 22ರಂದು ಅಳಿಕೆ ಸನಿಹದ ಮುಳಿಯ ವೆಂಕಟಕೃಷ್ಣ ಶರ್ಮರ ನಿವಾಸದಲ್ಲಿ ಜರುಗಿದ ಹಲಸಿನ ಹಬ್ಬದ ಕುರಿತು ವಿಚಾರ-ವಿಮರ್ಶೆ ಜರುಗಿತು. ಹಬ್ಬವನ್ನು ಉದ್ಘಾಟಿಸಿದ್ದ ಮಂಗಳೂರಿನ ನಿವೃತ್ತ ಅರಣ್ಯಾಧಿಕಾರಿ, ಹಲಸು ಪ್ರಿಯ ಗೇಬ್ರಿಯಲ್ ಪಿ.ಎಸ್.ವೇಗಸ್ ಹಲಸಿನ ಹಣ್ಣಿನ (ಹಹ) ಕೇಕನ್ನು ಕಟ್ ಮಾಡುವ ಮೂಲಕ ಕಲಾಪವನ್ನು ಉದ್ಘಾಟಿಸಿದರು. ಹಹ ಕೇಕನ್ನು ವೆಂಕಟಕೃಷ್ಣ ಶರ್ಮರ ಬಾಯಿಗಿಟ್ಟು ಖುಷಿ ಹಂಚಿಕೊಂಡರು. ಪೆರ್ಲದ ಶೈಲಜಾ ಶಿವಪ್ರಸಾದ್ ವರ್ಮುಡಿಯವರ ಅಡುಗೆಮನೆಯಲ್ಲಿ ಕೇಕ್ ಸಿದ್ಧವಾಗಿ ಮುಳಿಯಕ್ಕೆ ಬಂದಿತ್ತು. ಕೇಕ್ ಹಹ ಹಬ್ಬದಲ್ಲಿ ನಡೆದ ಸ್ಪರ್ಧೆಯಲ್ಲೂ ಬಹುಮಾನ ಬಂದಿತ್ತು. ಮುಖ್ಯ ಅತಿಥಿಗಳಾಗಿ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯ, ಹಲಸಿನ ಮೌಲ್ಯವರ್ಧಕ ಮೌನೀಶ ಮಲ್ಯರು ಉಪಸ್ಥಿತರಿದ್ದರು.
               ಶರ್ಮರ ಮನೆಯ ಹಿತ್ತಿಲಲ್ಲಿ ಚೊಚ್ಚಲ ಹೆರಿಗೆ ಮಾಡಿದ 'ಸದಾನಂದ ಹಲಸು' ಮತ್ತು ರಾಮಕುಂಜದ ಕೃಷ್ಣ ಕೆದಿಲಾಯರ ತೋಟದಲ್ಲಿ ಪ್ರಸವಿಸಿದ 'ಬೈರಚಂದ್ರ ಹಲಸು' ಹಣ್ಣುಗಳನ್ನು ಸರ್ಜರಿಗೆ ಒಳಪಡಿಸಲಾಯಿತು. ಈ ಎರಡು ತಳಿಗಳು ಕರಾವಳಿಗೆ ಹೊಸತು. ಅಡಿಕೆ ಪತ್ರಿಕೆಯು ಈ ಮೊದಲೇ ತಳಿಗಳ ಕುರಿತು ಬೆಳಕು ಚೆಲ್ಲಿತ್ತು. ಮುಂದಿನ ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಬಂಟ್ವಾಳದಲ್ಲಿ 'ಹಹ ಹಬ್ಬ'ವನ್ನು ಮಾಡುವ ಇಂಗಿತ ಮೌನೀಶ ಮಲ್ಯರದ್ದು.
               ವಾಣಿ ಶರ್ಮರ ಕೈರುಚಿಯ ಹಲಸಿನ ಹಲ್ವ, ಚಂಗುಳಿ ಉದರ ಸೇರುವುದರೊಳಗೆ; ಕಾರ್ಕಳ ಹಲಸು ಮೇಳದಲ್ಲಿ ಖರೀದಿಸಿದ ಕುಮಂದ್ರ, ಜ್ಯಾಕ್ ಪಾಟ್ ವಿತರಣೆ. ಹಹ ಸಕ್ಕರೆಬೆರಟ್ಟಿ, ಹ ಬೋಂಡ, ಸೊಳೆಗಳು ಸಾಥ್ ನೀಡಿದ್ದುವು. ಹಲಸು ಸ್ನೇಹಿ ಕೂಟದ ಎಲ್ಲಾ ಸದಸ್ಯರ ಉಪಸ್ಥಿತಿ.
              'ನಿರಗ್ನಿ ಮೇಳ'ವೊಂದನ್ನು ನಿಕಟಭವಿಷ್ಯದಲ್ಲಿ ಹಮ್ಮಿಕೊಳ್ಳುವ ಇರಾದೆ ವ್ಯಕ್ತಪಡಿಸಿದರು, ವೆಂಕಟಕೃಷ್ಣ ಶರ್ಮರು. 'ನಿರಗ್ನಿಯೊಂದಿಗೆ ನಿರ್ಜಲವೂ ಸೇರಿದರೆ ಹೇಗೆ?' ರಾಧಾ ಮುಳಿಯರ ಕೀಟಲೆ ಪ್ರಶ್ನೆ! ಕೊನೆಯಲ್ಲಿ ಶರ್ಮರ ಹಲಸು ತೋಟದ ವೀಕ್ಷಣೆ.
               'ಒಂದೊಂದು ಖಾದ್ಯಕ್ಕೆ ಹೊಂದುವಂತಹ ತಳಿಗಳನ್ನು ಬೆಳೆಸಿದರೆ ಭವಿಷ್ಯಕ್ಕೆ ಒಳ್ಳೆಯದು, ಗೇಬ್ರಿಯಲ್ ಸಲಹೆ ನೀಡಿದರು. ಪುಣಚ ಹಲಸು ಮೇಳದ ಯಶಸ್ಸಿನ ರೂವಾರಿಗಳಾದ ಮಲ್ಯ ಶಂಕರ ಭಟ್ ಮತ್ತು ಕೃಷ್ಣಪ್ರಸಾದ್ ಕೊಪ್ಪರತೊಟ್ಟು ಇವರನ್ನು ಅಭಿನಂದಿಸಲಾಯಿತು. ಉಬರು ರಾಜಗೋಪಾಲ ಭಟ್ ವಂದಿಸಿದರು.

0 comments:

Post a Comment