Monday, January 18, 2016

ರಾಷ್ಟ್ರೀಯ ವಿಜ್ಞಾನ ಚಲನ ಚಿತ್ರೋತ್ಸವಕ್ಕೆ ಕಾನ್ಮನೆ ಸಾಕ್ಷ್ಯ ಚಿತ್ರ

             ಮಕ್ಕಳಿಗೆ ಪರಿಸರ ಪಾಠ ಹೇಳುವುದು ಬಹಳ ಇಷ್ಟದ ಕೆಲಸ, ಆದರೆ ಇದನ್ನು ಕೆಮರಾ ಮುಂದೆ ಹೇಳುವುದಕ್ಕೆ ಬೇಸರ. ಮತ್ತೆ ಮತ್ತೆ ಶರ್ಟ್ ಬದಲಿಸುತ್ತಾ ಚಿತ್ರೀಕರಣಕ್ಕೆ ನಿಲ್ಲುವುದು ಬಹಳ ಬೇಜಾರು ತಂದಿತ್ತು. ಮರದ ಕತೆ ಹೇಳುತ್ತಾ ಸಸ್ಯ ವಿಸ್ಮಯ ವಿವರಿಸುತ್ತಾ 4 -5 ದಿನ ಕಳೆಯಿತು. ಒಂದು 15 ನಿಮಿಷದ ಸಾಕ್ಷ್ಯ ಚಿತ್ರಕ್ಕೆ ಸಮಯ ಜಾಸ್ತಿಯಾಯ್ತು, ಮನಸ್ಸು ಕೃಷಿ ಪ್ರವಾಸದ ಕಾಯಕ ನೆನಪಿಸಿ ಕೆಮರಾದಿಂದ ದೂರ ಓಡಲು ಹಂಬಲಿಸುತ್ತಿತ್ತು.
              'ಸರ್, ಈಗ ನಿಮಗೆ ಬೇಜಾರಾಗುತ್ತೆ , ನಂತ ನಿಮಗೆ ಖುಷಿಯಾಗುತ್ತೆ ' ಎಂದರು ಚಿತ್ರ ನಿರ್ಮಾಪಕರಾದ ಮೈಸೂರು ವಿಶ್ವವಿದ್ಯಾಲಯದ EMRC(Educational Multimedia Research Centre University of Mysore). ಗೋಪಿನಾಥ್.
               ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ನಡೆಯುವ ದೇಸಿ ಜ್ಞಾನದ ಪರಿಸರ ಶಿಕ್ಷಣ ಪ್ರಯೋಗದ ಕುರಿತು ಮೈಸೂರು ವಿವಿಯ ಎಮ್ ಆರ್ ಸಿ 'Kaanmane-Nurturing Nature' ಕಿರು ಚಿತ್ರ ನಿರ್ಮಿಸಿತ್ತು. ಇದು ಇಂದು ಆರನೇ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ 144 ಚಿತ್ರಗಳಲ್ಲಿ 12 ಚಿತ್ರಗಳನ್ನು ಪ್ರದರ್ಶನ,ಸ್ಪರ್ಧೆಗೆ ಆಯ್ಕೆಮಾಡಲಾಗಿದೆ. ಇದರಲ್ಲಿ ಕಾನ್ಮನೆ ಚಿತ್ರವೂ ಒಂದಾಗಿದೆ. ಬರುವ ಫೆಬ್ರುವರಿ 9-12 ರವರೆಗೆ ಮುಂಬೈದಲ್ಲಿ ನಡೆಯಲಿರುವ ವಿಜ್ಞಾನ ಚಿತ್ರೋತ್ಸವದಲ್ಲಿ ಇದು ಪ್ರದರ್ಶನಗೊಳ್ಳಲಿದೆ.
            ಖ್ಯಾತ ಬರಹಗಾರ ಮಿತ್ರ , EMRC ನಿರ್ದೇಶಕ ಡಾ.ನಿರಂಜನ ವಾನಳ್ಳಿ ಇದನ್ನು ನಿರ್ದೇಶಿಸಿದ್ದಾರೆ.ರಾಷ್ಟ್ರೀಯ ವಿಜ್ಞಾನ ಚಲನ ಚಿತ್ರೋತ್ಸವಕ್ಕೆ ಕಾನ್ಮನೆ ಸಾಕ್ಷ್ಯ ಚಿತ್ರ ಅಯ್ಕೆಯಾಗಿರುವದು ನನಗಂತೂ ಸಂತಸ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅರಣ್ಯವಾಸಿಗಳ ನೆಲಮೂಲ ಜ್ಞಾನವನ್ನು ಪರಿಸರ ಶಿಕ್ಷಣಕ್ಕೆ ಬಳಸುವ ಪ್ರಯತ್ನಕ್ಕೆ ಸಿಕ್ಕದೊಡ್ಡ ಪ್ರೋತ್ಸಾಹ ಇದಾಗಿದೆ.

0 comments:

Post a Comment