Thursday, November 12, 2009

ಕಾಡು ಮಾವು' ಅನಾವರಣ

ಚಿತ್ರ ವಿವರ: ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರಿಂದ 'ಕಾಡು ಮಾವು' ಪುಸ್ತಕದ ಅನಾವರಣ. ಚಿತ್ರದಲ್ಲಿ ನಾ. ಕಾರಂತ ಪೆರಾಜೆ, ಈರಯ್ಯ ಕಿಲ್ಲೇದಾರ್, ಶ್ರೀ ಪಡ್ರೆ, ವಾಸುದೇವ ಎಂ. ಹೆಗಡೆ, ನಾಗೇಶ ಹೆಗಡೆ ಮತ್ತು ನಾಗೇಂದ್ರ ಸಾಗರ್ ಇವರನ್ನು ಕಾಣಬಹುದು.)
ನಾ. ಕಾರಂತ ಪೆರಾಜೆಯವರ ಕೃಷಿ ಯಶೋಗಾಥೆಗಳ ಸಂಕಲನ 'ಕಾಡು ಮಾವು' ಕೃತಿಯು ಇತ್ತೀಚೆಗೆ ಶಿರಸಿ ಸನಿಹದ ಬೆಂಗಳಿಯಲ್ಲಿ ಅನಾವರಣಗೊಂಡಿತು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕ ಸಮಾರಂಭದಲ್ಲಿ ಖ್ಯಾತ ಪತ್ರಕರ್ತ ನಾಗೇಶ ಹೆಗಡೆ ಬಿಡುಗಡೆಗೊಳಿಸಿದರು.
ಹಿರಿಯ ಕೃಷಿಕರಾದ ವಾಸುದೇವ ಎಂ. ಹೆಗಡೆ ಇವರ ಗೌರವಾಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಲತಜ್ಞ ಶ್ರೀ ಪಡ್ರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಈರಯ್ಯ ಕಿಲ್ಲೇದಾರ್ ಅವರ 'ಸಾವಯವದ ಹಾದಿ' ಪುಸ್ತಕವೂ ಅನಾವರಣಗೊಂಡಿತು.
ಸಮಾರಂಭದಲ್ಲಿ ಕೃಷಿ ಮಾಧ್ಯಮ ಕೇಂದ್ರದ ಈ ಸಾಲಿನ 'ಕೃಷಿ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ಸಾಗರದ ನಾಗೇಂದ್ರ ಸಾಗರ್ ಅವರಿಗೆ ಪ್ರದಾನಿಸಲಾಯಿತು. ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ 'ವರಿಯಿಲ್ಲದ ರಸಾವರಿ' ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದೆ. ಕಾಮ್ ಫೆಲೋ ಸರ್ಟಿಫಿಕೇಟ್ ಪ್ರದಾನ, ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಕಾಮ್ ಅಭ್ಯರ್ಥಿಗಳ ಅತ್ಯುತ್ತಮ ಬರೆಹಗಳಿಗೆ ಬಹುಮಾನ ವಿತರಿಸಲಾಯಿತು.
ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಸ್ವಾಗತಿಸಿದರು. ಪತ್ರಕರ್ತ ಪೂರ್ಣಪ್ರಜ್ಞ ಬೇಳೂರು ವಂದಿಸಿದರು. ಪತ್ರಕರ್ತೆ ಅನುಸೂಯಾ ಶರ್ಮಾ ನಿರ್ವಹಿಸಿದರು.

0 comments:

Post a Comment