Sunday, November 1, 2009

ಅಡಿಕೆ ಯಂತ್ರ ಮೇಳಕ್ಕೆ ತೆರೆ

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ) ಸಾರಥ್ಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್ ಪುತ್ತೂರು ಇವರ ಹೆಗಲೆಣೆಯೊಂದಿಗೆ ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 'ಅಡಿಕೆ ಯಂತ್ರ ಮೇಳ'ಕ್ಕಿಂದು ತೆರೆ.
* ಸ್ವಾಗತ - ಶ್ರೀ ಪಡ್ರೆ, ಕಾರ್ಯನಿರ್ವಾಹಕ ಸಂಪಾದಕ, ಅಡಿಕೆ ಪತ್ರಿಕೆ
* ಸಮಾರೋಪ ಭಾಷಣ : ಪ್ರೊ: ಅನಿಲ್ ಕೆ.ಗುಪ್ತಾ, ಪ್ರೊಫೆಸರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್, ನ್ಯಾಶನಲ್ ಇನ್ನೋವೇಶನ್ ಪೌಂಡೇಶನ್ ಇದರ ಕಾರ್ಯಕಾರಿ ಉಪಾಧ್ಯಕ್ಷರು - "ಅಡಿಕೆ ಸಂಸ್ಕರಣೆ ಮತ್ತು ಸಿಂಪಡಣೆಯ ಸಂಶೋಧನೆಯಲ್ಲಿ ರೈತರೇ ಇಷ್ಟೊಂದು ಉತ್ಸಾಹದಿಂದ ಮುಂದೆ ಬಂದಿರುವುದು ನಿಜಕ್ಕೂ ಅದ್ಭುತ. ಕ್ಯಾಂಪ್ಕೋ, ವಿವೇಕಾನಂದ ಸಂಸ್ಥೆಗಳು, ಹಿರಿಯ ಸಂಶೋಧಕರು ಮತ್ತು ಇತರ ತಾಂತ್ರಿಕ ಅನುಭವವುಳ್ಳ ಹಿರಿಯರನ್ನೊಳಗೊಂಡ ಒಂದು ಸಲಹಾ ಸಮಿತಿ ರಚಿಸಿ, ಇದರಿಂದ ಸಂಶೋಧನೆಗೆ ಏನು ಅಗತ್ಯಗಳಿವೆ ಎಂಬುದನ್ನು ವಿಷದವಾಗಿ ವಿಶ್ಲೇಷಿಸಿ ನಮ್ಮ ನ್ಯಾಶನಲ್ ಇನೋವೇಶನ್ ಪೌಂಡೇಶನ್ ಸಂಸ್ಥೆಗೆ ಕಳುಹಿಸಿಕೊಟ್ಟರೆ ಸರ್ವಸಾಧ್ಯ ಸಹಕಾರವನ್ನು ನೀಡುತ್ತೇವೆ. ಇದರಲ್ಲಿ ಆರ್ಥಿಕ ಕೊಡುಗೆ ಹೆಚ್ಚು ಇರದು, ಆದರೆ ತಾಂತ್ರಿಕ ಮತ್ತಿತರ ಸಹಾಯವನ್ನು ನೀಡುವುದಲ್ಲದೆ, ಸಂಶೋಧಕರು ಬಯಸಿದರೆ ಅವರ ಸಂಶೋಧನೆಯು ಇನ್ನಷ್ಟು ಸುಧಾರಿಸುವಲ್ಲಿ ನಮ್ಮ ಸಹಾಯ ಹಸ್ತ ಇದೆ. ಎನ್.ಐ.ಫ್ ಪ್ರಯತ್ನದಿಂದ ಇದುವರೆಗೆ ಇನ್ನೂರ ಮೂವತ್ತೆಂಟು ಗ್ರಾಮೀಣ ಪೇಟೆಂಟ್ಗಳು ಸಿಕ್ಕಿವೆ. ಕಾಲೇಜುಗಳ ಮತ್ತು ಹೈಸ್ಕೂಲ್ಗಳಲ್ಲಿರುವ ವಿದ್ಯಾರ್ಥಿ ಶಕ್ತಿಯು ನಮ್ಮ ಅತಿ ದೊಡ್ಡ ಶಕ್ತಿ. ಬೆಳಕಿಗೆ ಬಾರದ ಗ್ರಾಮೀಣ ಪ್ರತಿಭೆಗಳು, ಸಂಶೋಧನೆ, ಅನುಶೋಧನೆಗಳನ್ನು ಹೊರತರುವ ಕೆಲಸಗಳಿಗೆ ಇವರನ್ನು ಹಚ್ಚಿ ದಯವಿಟ್ಟು ಪ್ರೇರೇಪಿಸಿ. ನಮ್ಮ ಇಂತಹ ಪ್ರಯತ್ನಗಳು ಬೇರೆಡೆ ಸಾಕಷ್ಟು ಫಲ ಕೊಟ್ಟಿದೆ.
ಶುಭಾಶಂಸನೆ : * ಕೆ.ಸಂತೋಷ್ ಕುಮಾರ್ ಭಂಡಾರಿ, ಅಧ್ಯಕ್ಷರು, ದ.ಕ.ಜಿಲ್ಲಾ ಪಂಚಾಯತ್ * ರಾಜೇಶ್ ಬನ್ನೂರು, ಪುರಸಭಾಧ್ಯಕ್ಷರು, ಪುತ್ತೂರು - ಇವರಿಂದ ಸಮಯೋಚಿತ ಮಾತು.
* ಸಂಶೋಧಕರಿಗೆ ಪ್ರಮಾಣ ಪತ್ರ ನೀಡಿದವರು - ಬಿ.ನಾಗರಾಜ ಶೆಟ್ಟಿ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ * ಸಂಶೋಧಕರಾದ ಎನ್. ಶಿವಶಂಕರ ಭಟ್, ಅಗಸಿ ಟೆಕ್ನಾಲಜೀಸ್, ಬೆಂಗಳೂರು ಮತ್ತು ಶ್ರೀಮತಿ ಗೀತಾ, ದುರ್ಗಾ ಮೆಕ್ಯಾನಿಕಲ್ ವಕ್ಸ್ಸ್ರ, ಗೋವಾ. - ಇವರಿಂದ ಅನಿಸಿಕೆ.
* ಎಸ್.ಆರ್.ರಂಗಮೂರ್ತಿಯವರಿಂದ ವಿವಿಧ ವ್ಯವಸ್ಥಾ ವಿಭಾಗಗಳ ಸಂಘಟಕರಿಗೆ ನೆನಪಿನ ಕಾಣಿಕೆ ನೀಡಿಕೆ
* ಉಪಸಂಹಾರ : ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ರಂಗಮೂರ್ತಿಯವರಿಂದ ಎಲ್ಲಾ ಸಂಶೋಧಕರನ್ನು ಒಂದೇ ಸೂರಿನಡಿಯಲ್ಲಿ ತಂದು, ರೈತರಿಗೆ ಮಾಹಿತಿ ನೀಡಲು ಅಡಿಕೆ ಯಂತ್ರ ಮೇಳವನ್ನು ಆಯೋಜಿಸಿದ್ದೇವೆ ಉದ್ದೇಶ ಸ್ಪಷ್ಟನೆ.
* ಅಧ್ಯಕ್ಷರ ಮಾತು : ಸಭಾಧ್ಯಕ್ಷ ಶ್ರೀ ನಾಗರಾಜ ಇತರ ದೇಶಗಳ ತಂತ್ರಜ್ಞಾನಗಳನ್ನು ಬಳಸಿಕೊಂಡು ವೈಜ್ಙಾನಿಕವಾಗಿ ಕೃಷಿ ಮಾಡಬೇಕು. ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಒತ್ತು ನೀಡಬೇಕಾದ ಅನಿವಾರ್ಯತೆ ಬಂದಿದೆ' ಎಂದರು.
* ಅತಿಥಿಗಳಿಗೆ ಸ್ಮರಣಿಕೆ - ಶ್ರೀನಿವಾಸ ಆಚಾರ್, ಅಧ್ಯಕ್ಷರು ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಮಧುಸೂದನ ರಾವ್, ಆಡಳಿತ ನಿರ್ದೇಶಕರು , ಕ್ಯಾಂಪ್ಕೋ ಲಿ.,* ಧನ್ಯವಾದ - ಶ್ಯಾಮ ಭಟ್, ಮಹಾಪ್ರಬಂಧಕರು, ಕ್ಯಾಂಪ್ಕೋ ಲಿ., ಮಂಗಳೂರು ಮತ್ತು ಸಂಚಾಲಕರು, ಅಡಿಕೆ ಯಂತ್ರ ಮೇಳ-೦೯
* ನಿರ್ವಹಣೆ : ಉಪನ್ಯಾಸಕರಾದ ಡಾ.ಶ್ರೀಶಕುಮಾರ್. ಹರಿಪ್ರಸಾದ್
* ಸಮ್ಮೇಳನ ವಿಶೇಷ: ಮೂರೂ ದಿವಸಗಳಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಕೃಷಿಕರು ಭಾಗವಹಿಸಿದ್ದರು.
ಚಿತ್ರ : ಶಶಿ ಪುತ್ತೂರು

0 comments:

Post a Comment