Saturday, October 31, 2009

ಅಡಿಕೆ ಯಂತ್ರ ಮೇಳ : ಚಿಂತನ-ಮಂಥನ

ಯಂತ್ರಮೇಳದಲ್ಲಿ ಮ್ಯಾಮ್ಕೋಸ್ ಅಧ್ಯಕ್ಷ ಕೆ.ನರಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಜರುಗಿತು. 'ಕೆಂಪಡಿಕೆ - ರೈತರ ಸಮಸ್ಯೆ ಮತ್ತು ಸಂಶೋಧನಾ ಆವಶ್ಯಕತೆ' ಕುರಿತು ತೀರ್ಥಹಳ್ಳಿಯ ಕೃಷಿಕ ಕೂಳೂರು ಸತ್ಯನಾರಾಯಣ, ಮಂಜೇಶ್ವರದ ಹಿರಿಯ ಕೃಷಿಕ ಡಾ.ಚಂದ್ರಶೇಖರ ಚೌಟರಿಂದ 'ಗೋಟಡಿಕೆ' ರೈತರ ಸಮಸ್ಯೆ ಮತ್ತು ಸಂಶೋಧನಾ ಆವಶ್ಯಕತೆ, ಸಾಗರದ ಮಥನ ಇಂಡಸ್ಟ್ರೀಸ್ನ ಉಮೇಶ್ ಬಿ.ಆರ್. ಮತ್ತು ತೀರ್ಥಹಳ್ಳಿಯ ವಿ-ಟೆಕ್ ಯಂತ್ರದ ಸಂಶೋಧಕ ಶ್ರೀ ವಿಶ್ವನಾಥ್ ಕುಂಟುವಳ್ಳಿಯವರಿಂದ 'ಯಂತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಸ್ವಾನುಭವ', ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಸಂಶೋಧನಾ ಇಂಜಿನಿಯರ್ ಡಾ. ಪಳನಿಮುತ್ತು ಅವರು ಅಡಿಕೆ ಸುಲಿತ ಮತ್ತು ಸಿಂಪಡಣೆಯ ಯಾಂತ್ರೀಕರಣದ ಸಾಧನೆ, ಸಾಧ್ಯತೆಗಳು ಹಾಗೂ ಸವಾಲುಗಳು ಮತ್ತು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರು ಫಲಪ್ರದ ಯಾಂತ್ರೀಕರಣದ ದಾರಿಯಲ್ಲಿ ಮಾಧ್ಯಮಗಳ ಪಾತ್ರಗಳ ಕುರಿತು ವಿಚಾರ ಪ್ರವಾಹಗಳು. ಭಾಗವಹಿಸಿದ ಕೃಷಿಕರಿಂದ ಆಲಿಕೆ ಮತ್ತು ಪ್ರಶ್ನೋತ್ತರಗಳ ಮೂಲಕ ಸ್ಪಂದನ.

ಗೋಷ್ಠಿಯ ಅಧ್ಯಕ್ಷತೆಯನ್ನು ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್ ವಹಿಸಿದ್ದರು. ರೈತನು ತನ್ನ ಬೆಳೆಗೆ ತಾನೇ ಬೆಲೆ ನಿರ್ಧಾರ ಮಾಡುವ ಅಧಿಕಾರ ಬಂದಾಗ ನಿಜಕ್ಕೂ ದೇಶ ಸುಭಿಕ್ಷವಾಗುತ್ತದೆ. ಬೇರು ಹುಳ, ಹಳದಿ ಎಲೆ ರೋಗ..ಮುಂತಾದ ಪ್ರಾಕೃತಿಕ ತೊಂದರೆಗಳಿಂದ ಅಡಿಕೆ ಬೆಳೆಗಾರನ ಮುಖದಲ್ಲಿ ನಗುವಿಲ್ಲ! ಜತೆಗೆ ಬೆಳೆಗಾರರಲ್ಲಿ ಸಂಘಟನೆಯ ಕೊರತೆಯಿಲ್ಲ ಅಡಿಕೆ ಕೃಷಿ ಮತ್ತು ಕೃಷಿಕರಿಗಾಗಿ ರಾಷ್ಟ್ರ ಮಟ್ಟದಲ್ಲಿ 'ಲಾಬಿ' ವ್ಯವಸ್ಥೆ ಆರಂಭವಾಗಿವೆ. ನಮ್ಮಲ್ಲಿ ಅಡಿಕೆ ಬೆಳೆಗಾರ ಅಂದರೆ ಶ್ರೀಮಂತ ಎಂಬ ಭಾವನೆಯಿದೆ. ವಸ್ತುಸ್ಥಿತಿ ಹೀಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಅಡಿಕೆ ಶೇಖರಣಾ ಕೊಠಡಿ ನಿರ್ಮಿಸಲು ನೆರವು ಸಿಗುತ್ತದೆ. ಈ ಮೂಲಕ ಕೃಷಿಕರು ಏಕ ಸಮಯದಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ತರುವುದನ್ನು ತಡೆಯಬಹುದು' ಎಂಬ ಅಭಿಪ್ರಾಯ.
ಮೇಳದಲ್ಲಿ ಭಾಗವಿಸಿದ ಕೃಷಿಕರ ಅಭಿಪ್ರಾಯಗಳು
* ಮೇಳದಲ್ಲಿ ಹಸಿ ಅಡಿಕೆ ಸುಲಿ ಯಂತ್ರಗಳ ಸಂಖ್ಯೆ ಕಡಿಮೆ. ಸಿಂಪಡಣಾ ಉಪಕರಣಗಳು ಚೆನ್ನಾಗಿವೆ ಕೊಳ್ಳುವ ಯೋಚನೆಯಲ್ಲಿದ್ದೇವೆ - ಬಸವರಾಜಪ್ಪ, ದಾವಣಗೆರೆ.
* ಭತ್ತದ ಯಂತ್ರಗಳು ಮನುಷ್ಯನ ಸಾಮಥ್ರ್ಯಕ್ಕೆ ಸರಿಯಾಗಿವೆ. ಅಡಿಕೆ ಯಂತ್ರಗಳು ಇನ್ನೂ ಆ ಸ್ಥಿತಿಗೆ ತಲುಪಿಲ್ಲ. ದರವೂ ಜಾಸ್ತಿ. ಗುಣಮಟ್ಟ ಸುಧಾರಿಸಬೇಕಾಗಿದೆ. - ವಿಜಯಾನಂದ ಮಂಗಳೂರು
* ನಮ್ಮಲ್ಲಿ ಕಾರ್ಮಿಕರ ಕೊರತೆ ತುಂಬಾ ಇದ್ದು, ಯಂತ್ರಗಳ ಆವಶ್ಯಕತೆಯಿದೆ. ಯಂತ್ರ ಖರೀದಿಗಾಗಿಯೇ ಬಂದಿದ್ದೇವೆ - ಸಿದ್ಧಲಿಂಗಪ್ಪ, ಚಿಕ್ಕಮಗಳೂರು
* ಯಂತ್ರಗಳಲ್ಲಿ ಅಡಿಕೆ ಸುಲಿಯುವಾಗ ಅಡಿಕೆಗೆ ಪೆಟ್ಟಾಗುತ್ತದೆ. ಬೇಕಾದಲ್ಲಿಗೆ ಒಯ್ಯುಬಹುದಾದ ಯಂತ್ರಗಳು ಬೇಕು - ಯಾಕೂಬ್ ಮುಂಡೂರು
* ಸಣ್ಣ ಯಂತ್ರಗಳು ಚೆನ್ನಾಗಿವೆ. ಕಡಿಮೆ ಕ್ರಯದ, ಕೈ ಚಾಲಿತ ಅಡಿಕೆ ಸುಲಿ ಉಪಕರಣಗಳು ಕೃಷಿಕನಿಗೆ ಉಪಕಾರಿ. ಪ್ರಾಮಾಣಿಕ ಕೆಲಸದವರನ್ನು ಕಳೆದುಕೊಳ್ಳುವ ಭೀತಿಯಲ್ಲಿ ತೆಂಗಿನಂತೆ - ಚಾಲಿ ಅಡಿಕೆ ಸಿಪ್ಪೆ ತೆಗೆಯುವ ಯಂತ್ರ ಚೆನ್ನಾಗಿದೆ - ನಾಗೇಂದ್ರನಾಥ್, ತೀರ್ಥಹಳ್ಳಿ

0 comments:

Post a Comment