
ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪ್ರಕಟಣೆಯಿದು. ವಿಷಯುಕ್ತ ಒಕ್ಕಲುತನ ಮಾಡುತ್ತಾ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿ ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವುದು - ಪ್ರಕಟಣಾ ಹಿಂದಿನ ಕೇಂದ್ರದ ಉದ್ದೇಶ. ಹತಾಶೆ ಕವಿದಿರುವ ಒಕ್ಕಲುತನದಲ್ಲಿ ಸ್ಫೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಕುರಿತಾದ ಪುಸ್ತಕ ಸರಣಿಯಲ್ಲಿ ಇದು ಮೂರನೇ ಪುಸ್ತಕ. ಈ ಹಿಂದೆ 'ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ' ಮತ್ತು 'ಗುಡ್ಡದ ಮೇಲಿನ ಏಕ ವ್ಯಕ್ತಿ ಸೈನ್ಯ' ಎಂಬೆರಡು ಪುಸ್ತಕಗಳು ಈ ಸರಣಿಯಲ್ಲಿ ಬೆಳಕು ಕಂಡಿವೆ.
'ಸಾವಯವದ ಹಾದಿಯಲ್ಲಿ' ಪುಸ್ತಕದ ಬೆಲೆ ರೂ.20. ಪುಟ 28.
ನೀವೇನು ಮಾಡಬಹುದು:
* ಕೃಷಿ ಮಾಧ್ಯಮ ಕೇಂದ್ರದ ಈ ವಿಶಿಷ್ಟ ಪುಸ್ತಕ ಸರಣಿಯ ಪ್ರಕಟಣೆಗೆ ಪ್ರಾಯೋಜಿಸಬಹುದು * ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಂತಿರುವ ಸಾಧಕರನ್ನು ಕೇಂದ್ರಕ್ಕೆ ತಿಳಿಸಬಹುದು.
ವಿಳಾಸ: ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008, ದೂರವಾಣಿ : 0836-೨೪೪೪೭೩೬
agriculturalmedia@gmail.com - www.farmedia.com
1 comments:
ಕಾರಂಥರೆ,
ನಿಮ್ಮ ಬ್ಲಾಗಲ್ಲಿ
ನಿಮ್ಮ ಯಕ್ಷ ಲೋಕದ
ಮಾಹಿತಿ ,ಅನುಭವ ,
ಭಾವಚಿತ್ರ ,ನುಡಿಚಿತ್ರ ಗಳನ್ನೂ ,,,,,
ದಾಕಲಿಸಿ ದರೆ ಹೇಗೆ?
ಒಳ್ಳೆದೆಂಧು ನನ್ನ ಅನಿಸಿಕೆ .
Post a Comment