Wednesday, November 25, 2009

ಸಾವಯವದ ಹಾದಿಯಲ್ಲಿ - ಪುಸ್ತಕ

'ಬರೆಯುವವರು ಬೆಳೆಯುವುದಿಲ್ಲ. ಬೆಳೆಯುವವರು ಬರೆಯುವುದಿಲ್ಲ' ಎಂಬ ಮಾತಿಗೆ ಬೆಳಗಾವಿಯ ಈರಯ್ಯ ಕಿಲ್ಲೇದಾರ್ ಒಂದು ಅಪವಾದ. ಸಾವಯವ ಕೃಷಿ ಅಂದರೆ ಜೀವನಧರ್ಮ ಎನ್ನುವುದು ಅವನ ನಂಬಿಕೆ. ಕಳೆದ ಎರಡು ದಶಕಗಳಿಂದ ಒಂದೂವರೆ ಎಕರೆ ಹಾಗೂ ತಮ್ಮ ಬದುಕು-ಚಿಂತನಾಕ್ರಮದಲ್ಲಿ ಕಿಲ್ಲೇದಾಎದ ನಡೆಸುತ್ತಿರುವ ಸಾವಯವ ಪ್ರಯೋಗಗಳು ಅವರಿಗೆ ಖುಷಿ-ನೆಮ್ಮದಿ. ಈ ಹೂರಣವೇ ಪುಸ್ತಕದ ಗಟ್ಟಿತನ. ಕಾಲೇಜು ವ್ಯಾಸಂಗದ ಬಳಿಕ ಒಕ್ಕಲುತನದ ಮೇಲಿನ ಒಲುಮೆಯಿಂದ ಹಳ್ಳಿಗೆ ಮರಳಿದ ಅವರು ಸಾವಯವ ಚಿಂತನೆಗಳಿಂದ ಪ್ರಭಾವಿತರಾದರು. ಸಾವಯವ ಕೃಷಿ ಕೇವಲ ಹೊಲಕ್ಕಷ್ಟೇ ಸೀಮಿತವಾಗಿರಬಾರದು, ಅದು ನಾವು ಯೋಚಿಸುವ ಕ್ರಮ ಹಾಗೂ ನಾವು ಬದುಕುವ ರೀತಿಗೂ ಅನ್ವಯಿಸಬೇಕು ಎಂಬುದು ಅವರ ನಿಲುವು.

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪ್ರಕಟಣೆಯಿದು. ವಿಷಯುಕ್ತ ಒಕ್ಕಲುತನ ಮಾಡುತ್ತಾ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿ ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವುದು - ಪ್ರಕಟಣಾ ಹಿಂದಿನ ಕೇಂದ್ರದ ಉದ್ದೇಶ. ಹತಾಶೆ ಕವಿದಿರುವ ಒಕ್ಕಲುತನದಲ್ಲಿ ಸ್ಫೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಕುರಿತಾದ ಪುಸ್ತಕ ಸರಣಿಯಲ್ಲಿ ಇದು ಮೂರನೇ ಪುಸ್ತಕ. ಈ ಹಿಂದೆ 'ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ' ಮತ್ತು 'ಗುಡ್ಡದ ಮೇಲಿನ ಏಕ ವ್ಯಕ್ತಿ ಸೈನ್ಯ' ಎಂಬೆರಡು ಪುಸ್ತಕಗಳು ಈ ಸರಣಿಯಲ್ಲಿ ಬೆಳಕು ಕಂಡಿವೆ.

'ಸಾವಯವದ ಹಾದಿಯಲ್ಲಿ' ಪುಸ್ತಕದ ಬೆಲೆ ರೂ.20. ಪುಟ 28.

ನೀವೇನು ಮಾಡಬಹುದು:
* ಕೃಷಿ ಮಾಧ್ಯಮ ಕೇಂದ್ರದ ಈ ವಿಶಿಷ್ಟ ಪುಸ್ತಕ ಸರಣಿಯ ಪ್ರಕಟಣೆಗೆ ಪ್ರಾಯೋಜಿಸಬಹುದು * ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಂತಿರುವ ಸಾಧಕರನ್ನು ಕೇಂದ್ರಕ್ಕೆ ತಿಳಿಸಬಹುದು.

ವಿಳಾಸ: ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008, ದೂರವಾಣಿ : 0836-೨೪೪೪೭೩೬
agriculturalmedia@gmail.com - www.farmedia.com

1 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕಾರಂಥರೆ,
ನಿಮ್ಮ ಬ್ಲಾಗಲ್ಲಿ
ನಿಮ್ಮ ಯಕ್ಷ ಲೋಕದ
ಮಾಹಿತಿ ,ಅನುಭವ ,
ಭಾವಚಿತ್ರ ,ನುಡಿಚಿತ್ರ ಗಳನ್ನೂ ,,,,,

ದಾಕಲಿಸಿ ದರೆ ಹೇಗೆ?
ಒಳ್ಳೆದೆಂಧು ನನ್ನ ಅನಿಸಿಕೆ .

Post a Comment