Sunday, February 7, 2010

ಬಿ.ಟಿ. - ದ್ವಂದ್ವ

* ದೇಶಧ ಏಳು ಸ್ಥಳಗಳಲ್ಲಿ ಎಂಟು ಸಾವಿರಕ್ಕು ಅಧಿಕ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಫೆಬ್ರವರಿ 10ರಂದು ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಬಿಟಿ ಬದನೆ ಬಗ್ಗೆ ನಿರ್ಧಾರ ಪ್ರಕಟಿಸುತ್ತೇನೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡುವಂತಹ ನಿರ್ಧಾರ ಆಗಿರುತ್ತದೆ. ಇದೇ ವೇಳೆ ವೈಜ್ಞಾನಿಕ ಸಂಶೋಧನೆಗಳನ್ನೂ ಕೇಂದ್ರ ಕಡೆಗಣಿಸದು.
- ಜೈರಾಂ ರಮೇಶ್, ಕೇಂದ್ರ ಪರಿಸರ ಸಚಿವ

* ಬಿ.ಟಿ.ಬದನೆ ಮಾನವನ ಆರೋಗ್ಯಕ್ಕೆ ಹಾನಿಕರ ಆಗಲಿದೆ ಎಂದು ತಜ್ಞರ ವರದಿಗಳು ಹೇಳುತ್ತವೆ. ಇಂತಹ ಮಾನವನ ಜೀವಕ್ಕೆ ಆಪಾಯಕಾರಿ ಆಗುವಂತಹ ತಳಿ ನಮಗೆ ಬೇಕಿಲ್ಲ. ಇದನ್ನು ಸರಕಾರ ಶೇ.101ರಷ್ಟು ವಿರೋಧಿಸುತ್ತದೆ. ಇದೇ ನಮ್ಮ ಅಂತಿಮ ನಿಲುವು. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.
- ಬಿ.ಎಸ್.ಯಡಿಯೂರಪ್ಪ, ಮುಖ್ಯಮನ್ತ್ರಿಗಳು

* ಕುಲಾಂತರಿ ಬದನೆ ಬಗ್ಗೆ ವಿಜ್ಞಾನಿಗಳಲ್ಲೇ ಒಡಕಿನ ಧ್ವನಿ ಕೇಳಿಬರುತ್ತಿದೆ. ಹೀಗಾಗಿ ಇದರ ಕುರಿತು ವಿಸ್ತೃತ ಚರ್ಚೆ ನಡೆಸಿ ಜಾಗ್ರತೆಯ ನಿರ್ಧಾರ ಕೈಗೊಳ್ಳಬೇಕಿದೆ. ಹಾಗಂತ ನಮ್ಮ ರೈತರ ಮೇಲೆ ಯಾವುದೇ ಕಾರಣಕ್ಕೂ ಇದನ್ನು ಮೊದಲು ಪ್ರಯೋಗಿಸುವುದು ಸರಿಯಲ್ಲ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಲಿ.
- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿಗಳು

ರೈತರ ದನಿ

* ಆಹಾರಕ್ಕೆ ವಿಷ ಬೆರೆಸುವ ಪ್ರಯತ್ನ ಇದು. ಅದೆಷ್ಟೋ ಕಾಲದಿಂದ ನಾವು ಬೆಳೆ ಬೆಳೆಯುತ್ತಾ ಬದುಕುತ್ತಿಲ್ಲವೇ? ಈಗ ಇದ್ದಕ್ಕಿದ್ದಂತೆ ಬಿಟಿ ಬೆಳೆದು ಮುಂದಿನ ಜನಾಂಗದ ಮೇಲೆ ಪರಿಣಾಮ ಉಂಟು ಮಾಡುವ ಮನಸ್ಸಿದೆಯೇ? ಬಿಟಿ ಬೇಡವೇ ಬೇಡ
- ಪಾಪಮ್ಮ, ಮುಳುಬಾಗಿಲು

* ಬಿಟಿ ಬದನೆಯನ್ನು ಸಂಶೋಧಿಸಿದ ವಿಜ್ಞಾನಿಗಳು ಮೊದಲು ತಿಂದು, ನಂತರ ತಮ್ಮ ಮಕ್ಕಳಿಗೆ ಕೊಡಲಿ. ಆಮೇಲೆ ಜನರಿಗೆ ತಿನ್ನಿಸಲಿ. ಈಗಾಗಲೇ ಬಿಟಿ ಬದನೆಯನ್ನು ಇಲಿ ಮೇಲೆ ಪ್ರಯೋಗಿಸಲಾಗಿದ್ದು, ಅದಕ್ಕೆ ಲಿವರ್ ಕಾಯಿಲೆ ಬಂದಿದೆ. ಸಂಶೋಧನೆಯಾದ ಮೇಲೆ ಮಾತನಾಡಿ.
- ನಾರಾಯಣ ರೆಡ್ಡಿ, ದೊಡ್ಡಬಳ್ಳಾಪುರ

* ರೈತರು ಭಿಕ್ಷಾ ಪಾತ್ರೆ ಹಿಡಿಯಲಿ ಎಂದು ಬಿಟಿಗೆ ಅವಕಾಶ ಕೊಡುತ್ತಿದ್ದಿರಾ? ನಾವೀಗ ಆರಾಮವಾಗಿ ಊರ ಬದನೆ ಬೆಳೆಯುತ್ತ ಸಂಸಾರ ನಡೆಸುತ್ತಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಅಂದ ಮೇಲೆ ಬಿಟಿ ಏಕೆ ಬೇಕು. ಹೀಗಾಗಿ ಸರ್ಕಾರ ತನ್ನ ಹಠ ಬಿಡುವುದು ಒಳ್ಳೆಯದು.
- ಗಂಗಮ್ಮ, ಬ್ಯಾದಾಗಿ

* ಕುಲಾಂತರಿ ಬದನೆ ಸಂಪೂರ್ಣ ಪ್ರಯೋಗ ನಡೆದಿಲ್ಲ. ಹೊಸ ತಂತ್ರಜ್ಞಾನಕ್ಕೆ ಬೆಲೆ ಕೊಡೋಣ. ಆದರೆ ಇನ್ನೂ ಸಂಶೋಧನೆಯಾಗಬೇಕಾದ ಕಾರಣ 30-40 ವರ್ಷ ಕಾಯಬೇಕು. ಸಂಶೋಧನೆಯಾಗದೆ ಇಷ್ಟೊಂದು ಜನರ ಮೇಲೆ ಪ್ರಯೋಗ ಮಾಡುವುದು ತಪ್ಪು.
- ಅಪರ್ಣಾ, ಬಯೋವಿಜ್ಞಾನಿ

ವಿಜ್ಞಾನಿಗಳ ಮತ

* ನಮ್ಮ ವಿವಿಯಲ್ಲೇ ಸಂಶೋಧನೆ ನಡೆಸುತ್ತಿದ್ದೇವೆ. ಇಂತಹ ಪರ-ವಿರೋಧ ಅಭಿಪ್ರಾಯ ಹಿಂದೆ ಹೈಬ್ರಿಡ್ ತಳಿ ಬಂದಾಗಲೂ ಇತ್ತು.
- ಡಾ.ಪಿ.ಜಿ.ಚೆಂಗಪ್ಪ, ಬೆಂ.ಕೃ.ವಿವಿ. ಕುಲಪತಿ

* ಬಿಟಿಯನ್ನು ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಬೆಳೆಯುತ್ತ ಇದ್ದೇವೆ. ಮೊಬೈಲ್, ಟಿವಿ ಬೇಕು ಎಂದಾದಲ್ಲಿ ಬಿಟಿ ಯಾಕೆ ಬೇಡ?
- ವಾಗೀಶ್ ಬಾಬು, ವಿಜ್ಞಾನಿ

* ಬಿಟಿಯಲ್ಲಿ ಪ್ರೋಟೀನ್ ಅಂಶ ಮಣ್ಣಿನಲ್ಲಿ ಸುಲಭವಾಗಿ ಕರಗುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಮದ ಯಾವುದೇ ಹಾನಿ ಇಲ್ಲ.
- ವಾಣಿ, ಭಾರತೀಯ ಕೃಷಿ ವಿಜ್ಞಾನ ಸಂಸ್ಥೆ ವಿಜ್ಞಾನಿ

* ನಮ್ಮ ದೇಶದಲ್ಲಿ ಬದನೆಗೆ ಬೇಡಿಕೆಯೇ ಇಲ್ಲ. ಈ ಬಗ್ಗೆ ವ್ಯಾಪಕ ಸಂಶೋಧನೆ ಆಗಲಿ. ವಿಸ್ತೃತ ಸಂಶೋಧನೆ, ಚರ್ಚೆ ಆಗದೆ ಬಿಡುಗಡೆ ಮಾಡೋದು ಬೇಡ.
- ಡಾ. ಬಡೆ, ವಿಜ್ಞಾನಿ

* ಬಿಟಿ ಬದನೆ ಮೂಲ ವಿಜ್ಞಾನಕ್ಕೆ ವಿರೋಧವಾದದ್ದು. ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಇದನ್ನು ಒಪ್ಪಿದೆಯೇ? ಬಿಟಿ ಬದನೆ ಕುಲಾಂತರಿ ತಳಿಯಲ್ಲೇ ಪ್ರಥಮವಾಗಿ ಬಂದಿರುವಂತಹದ್ದು. ಅದು ಭಾರತೀಯರ ಮೇಲೆಯೇ ಯಾಕೆ ಪ್ರಯೋಗವಾಗಬೇಕು?
- ಡಾ.ವಿಜಯನ್
(ಫೆ.೬ರಂದು ಬೆಂಗಳೂರಿನಲ್ಲಿ ಕೇಂದ್ರ ಪರಿಸರ ಸಚಿವರ ಉಪಸ್ಠಿತಿಯಲ್ಲಿ ಜರುಗಿದ ಬಿಟಿ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾದ ಕೆಲವು ಪ್ರತಿಕ್ರಿಯೆಗಳು. - ಕನ್ನಡಪ್ರಭದಿಂದ)-

2 comments:

ಸಾಗರದಾಚೆಯ ಇಂಚರ said...

ಒಳ್ಳೆಯ ಸಂಗ್ರಹ ನಿಮ್ಮದು

RAMESH DELAMPADY said...

everyone posts statements which suits his opinion.But you posted both sides of the opinion.Hats of to you.

Post a Comment