Wednesday, February 24, 2010

ಕಡೂರು : ಕೃಷಿಮೇಳ



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಫೆ.18, 19, 20ರಂದು
ಕಡೂರಿನಲ್ಲಿ ಜರುಗಿದ ಕೃಷಿಮೇಳದ ನೆನಪು ಸಂಚಿ.

30ನೇ ಕೃಷಿ ಮೇಳದ ಕುರಿತು ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳುವಂತೆ -
* 'ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಬಯಲು ಸೀಮೆಯಲ್ಲಿ ಕೃಷಿ ಮೇಳ ನಡೆಯುತ್ತಿದೆ. ಮಿಶ್ರಬೆಳೆ, ಉಪಬೆಳೆಗಳ ಬಗ್ಗೆ ಇಲ್ಲಿ ಹೆಚ್ಚು ಚರ್ಚೆಯಾಗಿದೆ. ಕೃಷಿ ಯಾಂತ್ರೀಕರಣ ಮಳಿಗೆಗಳಲ್ಲಿ ಅಪರೂಪದ ಮಾಹಿತಿ.'

* "ನಮ್ಮ ಎಲ್ಲಾ ಯೋಜನೆಗಳೂ ರೈತನ ಅಭ್ಯುದಯಕ್ಕಾಗಿ. ನಾವು ದುಡಿಯಬೇಕಾದ್ದು ರೈತನಿಗಾಗಿ ಎಂಬ ಮನೋಭಾವ ನಮ್ಮ ಅಧಿಕಾರಿ ವರ್ಗದಲ್ಲಿ ಮೂಡುವವರೆಗೂ ಪರಿಸ್ಥಿತಿ ಬದಲಾಗುವುದಿಲ್ಲ.'

* ಸಾಲ ಕೊಡುವುದೊಂದೇ ಗ್ರಾಮಾಭಿವೃದ್ಧಿಯಲ್ಲ. ಹಾಗೆಂದು ಸಾಲವೆಂಬುದು ಶೂಲವೂ ಅಲ್ಲ. ಅದು ಜೀವದ್ರವ್ಯದ ಮೂಲ ಬಂಡವಾಳ. ಸಾಲವನ್ನು ಬಂಡವಾಳವಾಗಿ ಪರಿವರ್ತಿಸಿ ಬಳಸಿಕೊಂಡವನು ಜೀವನದಲ್ಲಿ ಖಂಡಿತಾ ಗೆಲ್ಲುತ್ತಾನೆ. ಈ ಕಲೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಹಳ್ಳಿಗಳಲ್ಲಿ ಕಲಿಸುತ್ತಿದ್ದಾರೆ. ಹೀಗಾಗಿಯೇ ಯೋಜನೆ ವಿತರಿಸಿದ ಸಾಲಕ್ಕೆ ಶೇ.100 ವಸೂಲಿ ಇದೆ.

* ಮತ್ತೊಬ್ಬರ ಭಾವನೆ ಮತ್ತು ಅವಕಾಶಕ್ಕೆ ಧಕ್ಕೆ ತರದ ಯಾವ ಬೆಳವಣಿಗೆಯನ್ನಾದರೂ ನಾವು ಒಪ್ಪಲೇ ಬೇಕಾಗುತ್ತದೆ. ಭಾರೀ ಪ್ರಮಾಣದಲ್ಲಿ ಯಾಂತ್ರೀಕೃತ ಕೃಷಿಯ ಅಳವಡಿಕೆ ಇಂದಿನ ಅನಿವಾರ್ಯ ಎಂದು ಇತ್ತೀಚೆಗೆ ನನಗೆ ಅನ್ನಿಸುತ್ತಿದೆ. ನೂರು ಕೋಟಿ ಜನರ ಹೊಟ್ಟೆ ತುಂಬಿಸಲು ಹೆಚ್ಚು ಬೆಳೆಯುವುದು ಇಂದಿನ ತುರ್ತು. ಕೃಷಿಯಲ್ಲಿ ಬಂಡವಾಳ ಹೂಡುವವರೆಲ್ಲರನ್ನೂ ನಾವು ಅನುಮಾನದಿಂದ ನೋಡುವುದು ತಪ್ಪು. ಸಣ್ಣ ಕೃಷಿಕರಿಗೆ ಅವರಿಂದ ಧಕ್ಕೆಯಾಗಬಾರದೆನ್ನುವ ಎಚ್ಚರಬೇಕು.
ಚಿತ್ರ, ಮಾಹಿತಿ ಕೃಪೆ : ಡಿ.ಎಂ.ಘನಶ್ಯಾಮ

0 comments:

Post a Comment