Tuesday, November 16, 2010

ಅಶೋಕ ಫೌಂಡೇಶನ್ ಪ್ರತಿನಿಧಿಗಳ ಭೇಟಿ


ಅಮೆರಿಕದ ಅಶೋಕ ಫೌಂಡೇಶನಿನ ಭಾರತೀಯ ವಿಭಾಗವಾದ ಅಶೋಕ ಇಂಡಿಯಾದ ಮನೋಜ್ ಚಂದ್ರನ್ ಮತ್ತು ಶ್ವೇತಾ ಡಾಗಾ ಇಂದು 'ಅಡಿಕೆ ಪತ್ರಿಕೆ' ಕಚೇರಿಗೆ ಭೇಟಿ ಕೊಟ್ಟಿದ್ದರು. 'ಅಶೋಕ ಫೆಲೋ' ಆಗಿರುವ 'ಶ್ರೀ' ಪಡ್ರೆಯವರ ಈಚೆಗಿನ ಗ್ರಾಮೀಣ ಪತ್ರಿಕೋದ್ಯಮ ಚಟುವಟಿಕೆಗಳ ಬಗ್ಗೆ ತಿಳಕೊಳ್ಳುವುದು ಮತ್ತು ಕೃಷಿ - ಗ್ರಾಮೀಣಾಭಿವೃದ್ಧಿಯ ಈಗಿನ ಸ್ಥಿತಿಗತಿ, ಸಮಸ್ಯೆ, ಪರಿಹಾರ ಸಾಧ್ಯತೆಗಳ ಬಗ್ಗೆ ಅಧ್ಯಯನ ಭೇಟಿಯ ಉದ್ದೇಶ.

ತಂಡ ಅಡಿಕೆ ಕೃಷಿಯಲ್ಲಿ ಗರಿಷ್ಠ ಯಾಂತ್ರೀಕರಣ ಸಾಧಿಸಿ ಒಬ್ಬ ಕಾರ್ಮಿಕನ ಸಹಾಯದಿಂದ ಎಂಟು ಎಕ್ರೆ ಅಡಿಕೆ ಕೃಷಿ ನಿಭಾಯಿಸುತ್ತಿರುವ ಬನಾರಿ ಈಶ್ವರ ಪ್ರಸಾದ್ ಅವರ ತೋಟಕ್ಕೆ ಹೋಗಿ ಅಲ್ಲಿನ ವ್ಯವಸ್ಥೆ ಗಮನಿಸಿ ತುಂಬಾ ಮುಚ್ಚುಗೆ ವ್ಯಕ್ತಪಡಿಸಿತು.

ಬನಾರಿ ಗೋಪಾಲಕೃಷ್ಣ ಭಟ್ ಅವರ ಜತೆ ಕೃಷಿಯ ಆಗುಹೋಗುಗಳ ಬಗ್ಗೆ ತಂಡ ವಿಚಾರ ವಿನಿಮಯ ನಡೆಸಿದ ಅಡಿಕೆ ಪತ್ರಿಕೆಯ ಪ್ರಕಾಶಕ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶೀನಿವಾಸ ಆಚಾರ್ ಮತ್ತು ಅಪ ಸಂಪಾದಕೀಯ ಬಳಗದ ಸದಸ್ಯ, ಕೃಷಿಕ ಮತ್ತು ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ ಕೃಷಿರಂಗದ ಪ್ರಸಕ್ತ ಸವಾಲು, ಅಪ ಮೌಲ್ಯವರ್ಧನೆ, ಹಲಸಿನ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣಕ್ಕೆ ಪ್ರೇರಣೆ ಕೊಡುತ್ತಿರುವ ರೀತಿಯನ್ನು ತಂಡಕ್ಕೆ ತಿಳಿಸಿಕೊಟ್ಟರು.
(ಚಿತ್ರ: 'ಶ್ರೀ' ಪಡ್ರೆ)

0 comments:

Post a Comment