Wednesday, November 17, 2010

`ಕೃಷಿ ಉಳಿದರೆ ಗ್ರಾಮೀಣ ಸಂಸ್ಕೃತಿ ಉಳಿಯುತ್ತದೆ'



`ಅಧಿಕಾರ ವಿಕೇಂದ್ರೀಕರಣದಂತೆ ಪತ್ರಿಕೋದ್ಯಮದ ವಿಕೇಂದ್ರೀಕರಣವೂ ಅಗತ್ಯ. ಎಲ್ಲಾ (ಕನ್ನಡ) ಪತ್ರಿಕೆಗಳಲ್ಲಿ ಇದೀಗ ಸ್ಥಳೀಯ ಸುದ್ದಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಮೊದಲಿಗಿಂತ ಹೆಚ್ಚು ಗ್ರಾಮೀಣ ಸ್ದುದಿ ಪ್ರಕಟವಾಗುತ್ತಿವೆ. ಇವ್ಲೆಲವೂ ಸ್ವಾಗತಾರ್ಹ ಬೆಳವಣಿಗೆ. ನಮ್ಮ ಸುದ್ದಿಯನ್ನು ಇನ್ನೊಬ್ಬರು ಬರೆಯುವ ಬದಲು ನಾವೇ ನಮ್ಮ ಬದುಕನ್ನು ಮಾಧ್ಯಮದೆದುರು ತರಬೇಕು. ನಮ್ಮಂತೆ ಇರುವವರ ಬದುಕಿನ ಅಗತ್ಯತೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲು ಯತ್ನಿಸಬೇಕು. ಮಾಧ್ಯಮದ ಶಕ್ತಿಯನ್ನು ಬಳಸಿಕೊಳ್ಳಲು ಯತ್ನಿಸಬೇಕು...' - ನೀರಿಂಗಿಸುವ ಪಾಠವನ್ನು ಕಳೆದ ಎರಡು ದಶಕದಿಂದ ಅಚ್ಚುಕಟ್ಟಾಗಿ ಹೇಳುತ್ತಿರುವ ಶ್ರೀ ಪಡ್ರೆಯವರು ಮೂಡಿಗೆರೆ ತ್ಲಾಲೂಕಿನ ದೇವವೃಂದದ್ಲಲಿ ಮಂಡಿಸಿದ ವಿಚಾರಧಾರೆಯಿದು.

ಅ 28ರಿಂದ 31ರವರೆಗೆ ಮೂಡಿಗೆರೆ ತ್ಲಾಲೂಕಿನ ದೇವವೃಂದದ್ಲಲಿ ನಡೆದ `ಗ್ರಾಮೀಣ ಕೃಷಿ ಪತ್ರಿಕೋದ್ಯಮ ಶಿಬಿರ'ದ್ಲಲಿ ಹತ್ತು ಹಲವು ವಿಚಾರಗಳು ವ್ಯಕ್ತವಾದವು. ಕೃಷಿ ಕೇಂದ್ರಿತ ಗ್ರಾಮೀಣ ಬದುಕನ್ನು ಮಾಧ್ಯಮದಲ್ಲಿ ಹೇಗೆ ಬಿಂಬಿಸಬೇಕು? ಮತ್ತು ಏಕೆ ಬಿಂಬಿಸಬೇಕು? ಎಂಬ ಎರಡು ಪ್ರಶ್ನೆಗಳ ಸುತ್ತ 4 ದಿನ ವಿಚಾರ ಮಂಥನ ನಡೆಯಿತು.

ಈ ಶಿಬಿರದ್ಲಲಿ ಪಾಲ್ಗೊಂಡ ಶಿಬಿರಾರ್ಥಿಗಳು ಕೇವಲ ಬರವಣಿಗೆಯ ತಂತ್ರಗಳನ್ನು ಮಾತ್ರವಲ್ಲ ಕೃಷಿ ಜಗತ್ತಿನ ಆಗುಹೋಗುಗಳ ಇಣುಕು ನೋಟವನ್ನೂ ಪಡೆದರು. ಕೃಷಿ ಇಲಾಖೆಯ ಅಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಕೃಷಿಕರು, ಪ್ರಮುಖ ಪತ್ರಿಕೆಗಳಲ್ಲಿ - ಚಾನೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸುವ ಹಂಬಲ ಇರುವವರೂ ಇಲ್ಲಿ ಕೃಷಿ ಪತ್ರಿಕೋದ್ಯಮದ ಪಾಠ ಕಲಿತರು.

`ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹುಲಿ ಸಂರಕ್ಷಣೆ ಹೇಗೆ ಒಂದು ಪ್ರತಿಮೆಯಾಗುತ್ತದೆಯೋ ಹಾಗೆ ಕೃಷಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಗ್ರಾಮೀಣ ಸಂಸ್ಕೃತಿಯ ಉಳಿವಿಗೇ ಒಂದು ಪ್ರತಿಮೆಯಾಗುತ್ತದೆ' ಎಂದ ಸಂಪನ್ಮೂಲ ವ್ಯಕ್ತಿಗಳ ಮಾತು ಕೃಷಿಯ ಮಹತ್ವವನ್ನು ಸಾರಿ ಹೇಳಿತ್ತು.

ಕೃಷಿಕರ ಸಮಸ್ಯೆಗಳನ್ನು ಬರೆಯಲು ಹೊರಡುವ ಅನೇಕರು ಎಲ್ಲಾ ಸಮಸ್ಯೆಗೂ ಪರಿಹಾರ ಸೂಚಿಸುವ ಅತ್ಯುತ್ಸಾಹದ್ಲಲಿ ಮುನ್ನುಗ್ಗುತ್ತಾರೆ. ಕೆಲವರು ತಾವೇ ಸ್ವತಃ ಕೃಷಿಕರಾಗಿ ತಮ್ಮ ಅನುಭವಕ್ಕೇ ನಿಷ್ಠರಾಗಿ ಬರೆಯಬೇಕು ಎಂದು ಹಂಬಲಿಸುತ್ತಾರೆ. ಇನ್ನೂ ಕೆಲವರು ಉಪದೇಶಾತ್ಮಕವಾಗಿ ತಮ್ಮ ಅಭಿಪ್ರಾಯಗಳನ್ನು ಹೇರಲು ಲೇಖನವನ್ನು ಸಾಧನವನ್ನಾಗಿಸಿಕೊಳ್ಳುತ್ತಾರೆ. ಕೃಷಿ ಪತ್ರಿಕೋದ್ಯಮ ಅನುಭವಿಸುತ್ತಿರುವ ಈ ಭ್ರಮೆಗಳನ್ನು ಕಳಚಲು ದೇವವೃಂದ ಶಿಬಿರ ಸಾಕಷ್ಟು ಶ್ರಮಿಸಿತು.

`ನಿಮ್ಮ ಮಾಹಿತಿ ಮೂಲಗಳನ್ನು ಗೌರವಿಸಿ. ಅವರಿಂದ ಮಾಹಿತಿ ಪಡೆದು ಲೇಖನ ಬರೆದು ಅದು ಪ್ರಕಟಗೊಂಡ ನಂತರ ಮಾಹಿತಿ ಮೂಲವನ್ನು ನಿರ್ಲಕ್ಷಿಸಬೇಡಿ. ರೈತರನ್ನು ಕೇವಲವಾಗಿ ಕಾಣುವ ಧೋರಣೆಯನ್ನು ಕೈಬಿಡಿ. ಕೃಷಿ ವಿಜ್ಞಾನಿಗಳು ವಿಶ್ವವಿದ್ಯಾಲಯಗಳಲ್ಲಿ ಮಾಡುವ ಸಂಶೋಧನೆಯಷ್ಟೇ ಪ್ರಮುಖವಾದ ಸಾಧನೆಯನ್ನು ಹಲವು ರೈತರು ತಮ್ಮ ಹೊಲದಲ್ಲಿಯೇ ಸಾಧಿಸಿರುವ ಹಲವು ಉದಾಹರಣೆಗಳಿವೆ. ಅಂಥವನ್ನು ಹುಡುಕಿ ಬೆಳಕಿಗೆ ತರಬೇಕು. ನಮ್ಮಿಂದ (ಬರಹಗಾರರಿಂದ) ನಿಮಗೆ (ರೈತರಿಗೆ) ಲಾಭ ಎಂಬ ಮನಸ್ಥಿತಿ ನಿಮ್ಮಲ್ಲಿ ಎಂದಿಗೂ ಮೂಡಬಾರದು' ಎಂದ ಅಂಕಣಕಾರ ಶಿವಾನಂದ ಕಳವೆ ಅವರ ಮಾತು ಮನದಲ್ಲಿ ಅಚ್ಚೊಚ್ಚಿ ನಿಂತಿತು.

`ಮಾಧ್ಯಮಗಳು ಗ್ರಾಮೀಣ ಬದುಕಿನ ಸುದ್ದಿ ಪ್ರಕಟಿಸುತ್ತಿಲ್ಲ, ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ಗೊಣಗುವ ಬದಲು ನೀವೇ ಲೇಖನಿ ಹಿಡಿದು ಪತ್ರಿಕೆಗಳಿಗೆ ಬರೆಯಿರಿ. ವಾಚಕರವಾಣಿಯ ಮೂಲಕ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಿರಿ. ಜಿಲ್ಲಾ ವರದಿಗಾರರು ಅಥವಾ ಸಂಪಾದಕರಿಗೆ ಸುದ್ದಿಯ ಸುಳಿವು ನೀಡಿ. ಮಾಧ್ಯಮಗಳನ್ನು ಹೀಗಳೆಯುವ ಬದಲು ಅದನ್ನು ನಿಮ್ಮ ಅಭ್ಯುದಯಕ್ಕೆ ಬಳಸಿಕೊಳ್ಳಿ' ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಕಿವಿಮಾತು ಹೇಳಿದರು.

ಕೃಷಿ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರ ಬಳಕೆಯ ಬಗ್ಗೆ ಸಾಗರದ ಪೂರ್ಣಪ್ರಜ್ಞ ಬೇಳೂರು ಹಲವು ಒಳನೋಟಗಳನ್ನು ನೀಡಿದರು. ಪತ್ರಿಕೋದ್ಯಮದ ಭಾಷೆ ಹಾಗೂ ಲೇಖನ ಬರವಣಿಗೆಯ ಬಗ್ಗೆ ಮತ್ತೊಬ್ಬ ಹಿರಿಯ ಪತ್ರಕರ್ತ ಆನಂದ ತಿಳಿಸಿಕೊಟ್ಟರು. ಕನ್ನಡ ಕೃಷಿ ಪತ್ರಿಕೋದ್ಯಮದ ಸ್ಥಿತಿಗತಿಯ ಬಗ್ಗೆ ದೃಶ್ಯ ರೂಪಕ ಪ್ರದರ್ಶಿಸಿದ ಮ್ಲಲಿಕಾರ್ಜುನ ಹೊಸಪಾಳ್ಯ ಮತ್ತು ನಾ. ಕಾರಂತ ಪೆರಾಜೆ ಶಿಬಿರಾರ್ಥಿಗಳ ಮನ ಗೆದ್ದರು. ಶಿಬಿರಾರ್ಥಿಗಳ ಹಲವು ಸಂಶಯಗಳನ್ನು ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು ಮತ್ತು ಶಿವರಾಮ ಪೈಲೂರು ಪರಿಹರಿಸಿದರು.

ಬರೆಹ - ಎನ್.ಎಂ.ನಟರಾಜ್
(ಚಿತ್ರ-ನೆರವು - ಘನಶ್ಯಾಮ್)

0 comments:

Post a Comment