Monday, August 15, 2011

'ಬಯೋಪಾಟ್' ಮಾಹಿತಿ ಕಾರ್ಯಾಗಾರ



"ಕೃಷಿಯಲ್ಲಿ ಲಘುಪೋಷಕಾಂಶಗಳ ನಿರ್ವಹಣೆ ಅತೀ ಅಗತ್ಯ. ಕಾಳುಮೆಣಸಿನ ಸೊರಗು ರೋಗ ನಿಯಂತ್ರಣವನ್ನು ಪೋಷಕಾಂಶಗಳ ನಿರ್ವಹಣೆ, ಇದಕ್ಕೆ ಸಂಬಂಧಿಸಿದ ಬಯೋಪಾಟ್ ಸಿಂಪಡಣೆಯನ್ನು ಮಳೆಗಾಲದ ಮೊದಲು, ನಂತರ ಸಿಂಪಡಿಸಿದಲ್ಲಿ ಹತೋಟಿಗೆ ತರಬಹುದು" ಎಂದು ಬೆಂಗಳೂರು ಕ್ರಾಪ್ಕೆರ್ ಇಂಡಿಯಾದ ವಿಜ್ಞಾನಿ ಪ್ರಕಾಶ್ ಅಭಿಪ್ರಾಯಪಟ್ಟರು.

ಅವರು ಪುತ್ತೂರಿನ 'ಸಮೃದ್ಧಿ' ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಜಿ.ಎಲ್.ರೋಟರಿ ಸಭಾಭವನದಲ್ಲಿ ಆಯೋಜಿಸಿದ 'ಮಾಹಿತಿ-ಸಂವಾದ' ಕಾರ್ಯಕ್ರಮದಲ್ಲಿ ಕಾಳುಮೆಣಸು ಸೊರಗು ರೋಗ ನಿಯಂತ್ರಣ, ಅಡಿಕೆ ಮರದ ಬುಡಕ್ಕೆ ಬಯೋಪಾಟ್ ಉಣಿಸಿ ಕೊಳೆರೋಗ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ವಿಜ್ಞಾನಿ ಚಂದ್ರಶೇಖರ್ ಕ್ರಾಪ್ಕೇರ್ ಸಿಂಪಡಣೆಯ ಕೃಷಿಕರ ಫೀಡ್ಬ್ಯಾಕನ್ನು ವಿವರಿಸಿದರು.

ಈ ವರುಷ ಬಯೋಪಾಟ್ನ್ನು ಸಿಂಪಡಿಸಿದ ಬಹುತೇಕ ತೋಟಗಳಲ್ಲಿ ಕೊಳೆರೋಗದ ಅಂಶ ಬಹಳಷ್ಟು ಕಡಿಮೆಯಿರುವ ಕುರಿತು ಬಳಸಿದ ಕೃಷಿಕರು ತಮ್ಮ ಅನುಭವಗಳನ್ನು ಹಂಚಿಕೊಡರು.

ಶ್ರೀಗಳಾದ ಸೇಡಿಯಾಪು ತ್ರಿವಿಕ್ರಮ ಭಟ್, ವಿಶ್ವಪ್ರಸಾದ್, ಬಿ.ಟಿ.ನಾರಾಯಣ ಭಟ್, ಡಾ.ಡಿ.ಸಿ.ಚೌಟ, ಜಿ.ಬಿ.ನೂಜಿ, ಮೈಕೆ ಗಣೇಶ ಭಟ್, ಪವನ ವೆಂಕಟ್ರಮಣ ಭಟ್, ಶ್ರೀಮತಿ ಉಷಾ ಮೆಹಂದಳೆ, ಡಾ.ಜಯಪ್ರಕಾಶ್, ಶಿವಸುಬ್ರಹ್ಮಣ್ಯ ಪೆಲತ್ತಡ್ಕ, ಎ.ಪಿ.ಸದಾಶಿವ.. ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.

'ಕೃಷಿಯಲ್ಲಿ ಆಧುನಿಕ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಬಂದಿದೆ. ಕೃಷಿಕರ ಸಭೆಗಳು ಆಗಾಗ ನಡೆದಾಗ ನೋವು-ನಲಿವು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯ' ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಹೇಳಿದರು. ಸಮೃದ್ಧಿಯ ಕಾರ್ಯದರ್ಶಿ ರಾಮ್ ಕಿಶೋರ್, ಕೊಳೆರೋಗಕ್ಕೆ ಸಿಂಪಡಿಸುವ ಕ್ರಾಪ್ಕೇರ್ ಉತ್ಪನ್ನದ ಲ್ಯಾಬ್ ಫಲಿತಾಂಶವನ್ನು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶ್ರೀ ಅನ್ನಪೂರ್ಣ ಏಜೆನ್ಸೀಸ್ ಇದರ ಮುಖ್ಯಸ್ಥ ಸುಧೀರ್ ಇವರು ಇಟೆಲಿ ನಿರ್ಮಿತ ಸ್ಪ್ರೇಗನ್ಗಳ ಮಾಹಿತಿ ನೀಡಿದರು. ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ, ಮಾಣಿ ಇವರು ಸ್ಪ್ರೇಗನ್ ಬಳಸಿ ನೋಡಿದ ಅನುಭವ ಹಂಚಿಕೊಂಡರು. ಬಳಿಕ ಪುತ್ತೂರಿನ ಸಾಯ ಎಂಟರ್ಪ್ರೈಸಸ್ ಇವರ ಸಹಯೋಗದೊಂದಿಗೆ ಸ್ಪ್ರೇಗನ್ನಿನ ಪ್ರಾತ್ಯಕ್ಷಿಕೆ ನಡೆಯಿತು.

'ಸಮೃದ್ಧಿ' ಪುತ್ತೂರು ಇದರ ಕಾರ್ಯದರ್ಶಿ ರಾಮ್ ಕಿಶೋರ್ ಮಂಚಿ ಸ್ವಾಗತಿಸಿ, ನಿರ್ವಹಿಸಿದರು. ಅಧ್ಯಕ್ಷ ಪೆರುವಾಜೆ ಈಶ್ವರ ಭಟ್ ವಂದಿಸಿದರು. ಹಿರಿಯ ಕೃಷಿಕ, ಸಾಹಿತಿ ವಾಟೆ ಮಹಾಲಿಂಗ ಭಟ್ ಅಡ್ಯನಡ್ಕ ಪ್ರಾರ್ಥಿಸಿದರು.

0 comments:

Post a Comment