Sunday, October 30, 2011

'ಶ್ರೀ'ಪಡ್ರೆಯವರಿಂದ ಹವಾಯ್ ಅನುಭವ ಪ್ರಸ್ತುತಿ


ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹಾಸಭೆಯು 29 ಅಕ್ಟೋಬರ್ 2011ರಂದು ಪುತ್ತೂರಿನ ದ.ಕ.ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ನಡೆದಿತ್ತು.

ಅಡಿಕೆ ಪತ್ರಿಕೆಯು ಹೊರತಂದ ತನ್ನ 23ನೇ ಹುಟ್ಟುಹಬ್ಬ ವಿಶೇಷಾಂಕವನ್ನು ಸಂಘದ ಅಧ್ಯಕ್ಷ ಹಾಗೂ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಸುಳ್ಯ ವಿಶ್ವನಾಥ ರಾವ್, ಕೋಟೆ ದಯಾನಂದ, ವಾಟೆ ಮಹಾಲಿಂಗ ಭಟ್, ಗುಂಡ್ಯಡ್ಕ ವೆಂಕಟ್ರಮಣ ಭಟ್.. ಮೊದಲಾದ ಗಣ್ಯರು ಅನಾವರಣಗೊಳಿಸಿದರು.

ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ'ಪಡ್ರೆಯವರು ಈಚೆಗೆ ಹವಾಯ್ ದ್ವೀಪಕ್ಕೆ ಭೇಟಿ ನೀಡಿದ್ದರು. ಅವರ ಪ್ರವಾಸ ಅನುಭವ ಮತ್ತು ಹವಾಯಿಯ ಹಣ್ಣಿನ ಕುರಿತಾಗಿ ಪವರ್ ಪಾಯಿಂಟ್ ಪ್ರಸ್ತುತಿ ನಡೆಯಿತು. ಗಿಡಗೆಳೆತನ ಸಂಘ 'ಸಮೃದ್ಧಿ'ಯ ಸಹಯೋಗ.

(ಚಿತ್ರ : ಪಡಾರು)

0 comments:

Post a Comment