Tuesday, September 20, 2011

ಶ್ರೀ ಪಡ್ರೆ ಸ್ವದೇಶಕ್ಕೆ...





ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ‘ಶ್ರೀ’ ಪಡ್ರೆಯವರು ಹದಿನೈದು ದಿವಸಗಳ ಹವಾಯ್ ಪ್ರವಾಸದ ಬಳಿಕ ಸ್ವದೇಶಕ್ಕೆ ಮರಳುವ ಶುಭಘಳಿಗೆ.

ಹವಾಯ್ ಹಣ್ಣುಕೃಷಿಕ, ಪತ್ರಕರ್ತ ಕೆನ್ ಲವ್ ಅವರ ಆಹ್ವಾನದ ಮೇರೆಗೆ ಪಡ್ರೆಯವರು ಸೆಪ್ಟೆಂಬರ್ 3ರಂದು ಹವಾಯಿಗೆ ಪ್ರಯಾಣಿಸಿದ್ದರು. ಹಣ್ಣು ಬೆಳೆಗಾರರ ವಾರ್ಶಿಕ ಸಮ್ಮೇಳನದಲ್ಲಿ ಭಾಗಿ. ಭಾರತದ ಹಣ್ಣುಗಳ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ. ಕೆನ್ ಸಾರಥ್ಯದಲ್ಲಿ ಹವಾಯ್ ದ್ವೀಪಗಳಿಗೆ ಭೇಟಿ. ಹಣ್ಣಿನ ತೋಟ ವೀಕ್ಷಣೆ. ರೈತ ಮಾರುಕಟ್ಟೆ ಭೇಟಿ. ರೈತರೊಂದಿಗೆ ಮಾತುಕತೆ. 'ನಮ್ಮೂರಲ್ಲಿಲ್ಲದ ಅನೇಕ ಹಣ್ಣುಗಳ ಪರಿಚಯವಾಯಿತು' ಎನ್ನುತ್ತಾರೆ.

ಕೆನ್ ಅವರ ಊರಲ್ಲಿ ಭಾರತದ ಪ್ರತಿಷ್ಠಿತ 'ಅಡಿಕೆ ಪತ್ರಿಕೆ'ಯ ಸಂಪಾದಕರಿಗೆ ಸಿಕ್ಕ ಗೌರವ ನೆಲವನ್ನು ಪ್ರೀತಿಸುವ ಎಲ್ಲರೂ ಖುಷಿ ಪಡುವಂತಾದ್ದು.

ಶ್ರೀ ಪಡ್ರೆಯವರು ಹವಾಯಿಯಲ್ಲಿದ್ದಷ್ಟು ದಿವಸ ಮಿಂಚಂಚೆ ಮಾತುಕತೆ, ತೆಗೆದ ಫೋಟೋಗಳ ರವಾನೆ, ಚುಟುಕಾದ ಪ್ರವಾಸ ಕಥನಗಳನ್ನು ತಿಳಿಸುತ್ತಲೇ ಇದ್ದರು. ತನಗೆ ತಿಳಿದ ವಿಚಾರ, ಚಿತ್ರಗಳನ್ನು ಸಮಾನಾಸಕ್ತರೊಂದಿಗೆ ಹಂಚಿಕೊಳ್ಳುವುದು ಅವರಿಗೆ ಖುಷಿ.

0 comments:

Post a Comment