Monday, February 27, 2012

'ಶ್ರೀ' ಪಡ್ರೆಯವರಿಗೆ ಸಂದೇಶ ಪ್ರಶಸ್ತಿ ಪ್ರದಾನ

ಮಂಗಳೂರಿನ ಸಂದೇಶ ಕಲಾ ಪ್ರತಿಷ್ಠಾನವು ನಿನ್ನೆ (26-2-2012) ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ 'ಸಂದೇಶ ಶಿಕ್ಷಣ ಮಾಧ್ಯಮ ಪ್ರಶಸ್ತಿ' ನೀಡಿ ಗೌರವಿಸಿತು.

ಜಲಸಂರಕ್ಷಣೆಯ ಅರಿವನ್ನು ಬಿತ್ತ ಜಲಸಾಕ್ಷರರನ್ನು ರೂಪಿಸಿದ್ದ ಸಾಧನೆಯನ್ನು ಪರಿಗಣಿಸಿ ಸಂದೇಶ ಸಂಸ್ಥೆಯು ಈ ಪ್ರಶಸ್ತಿಯನ್ನು ಶ್ರೀ ಪಡ್ರೆಯವರಿಗೆ ನೀಡಿತ್ತು. ಸಮಾರಂಭದ ಅಧ್ಯಕ್ಷತೆ ರೆ.ಡಾ.ಅಲೋಶಿಯಸ್ ಪೌಲ್ ಡಿ'ಸೋಜ. ಫಾ.ಡಾ.ಹೆನ್ರಿ ಡಿ'ಸೋಜರು ಮತ್ತು ಸಾಹಿತಿ ವೈದೇಹಿ - ಮುಖ್ಯಅತಿಥಿ.

ಸಾಹಿತಿ ಡಾ.ನಾ.ಡಿ'ಸೋಜ ನೇತೃತ್ವದ ತೀರ್ಪುಗಾರರ ಸಮಿತಿ ಪ್ರಶಸ್ತಿಗೆ ಅರ್ಹರರನ್ನು ಆಯ್ಕೆ ಮಾಡಿತ್ತು. ಇತರ ಪ್ರಶಸ್ತಿ ಪುರಸ್ಕೃತರು : ಎಂ.ಮಾಧವ ಪೈ, ಕ್ಯಾಥರಿನ್ ರಾಡ್ರಿಗಸ್, ಪೀಟರ್ ಲೂಯಿಸ್, ಇಂದೂಧರ ಹೊನ್ನಾಪುರ, ಸಿಸ್ಟರ್ ಮರಿಯ ಜ್ಯೋತಿ,ಜಾನ್ ಡಿ'ಸಿಲ್ವ, ಗೀತಪ್ರಿಯ, ಜೆರೋಮ್ ಡಿ'ಸೋಜ.

(ಚಿತ್ರ ಕೃಪೆ : ಡಿಜಿವರ್ಲ್ಡ್ )

1 comments:

Ananda said...

it's great to see Padreji being honoured.
Ananda

Post a Comment