ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಕಚೇರಿಯ ಸೂರಿನ ನೀರನ್ನು ಹಿಡಿದಿಡಲು 'ಮಳೆನೀರಿನ ಕೊಯ್ಲು' ಘಟಕ ಸ್ಥಾಪಿಸಿದೆ. ಜುಲಾಯಿ 1ರಂದು 'ಸ್ಟೇಟ್ ಬ್ಯಾಂಕ್ ಡೇ'ಯಂದು ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಘಟಕಕ್ಕೆ ನೀರನ್ನು ಎರೆಯುವುದರ ಮೂಲಕ ಶುಭಾರಂಭಗೊಳಿಸಿದರು. 'ಗ್ರೀನ್ ಬ್ಯಾಂಕಿಂಗ್ ಪ್ರಾಕ್ಟೀಸ್'ನಡಿ ಈ ಘಟಕ ಆರಂಭಗೊಂಡಿದೆ. ಬ್ಯಾಂಕಿನ ವರಿಷ್ಠ ಗಣೇಶ ಭಟ್ ಶುಭಾಶಂಸನೆ ಮಾಡಿದರು. ಬ್ಯಾಂಕಿನ ಬಹುತೇಕ ಆಸಕ್ತ ಸಿಬ್ಬಂದಿಗಳ ಉಪಸ್ಥಿತಿ. 'ನೀರನ್ನು ತುಪ್ಪದ ಹಾಗೆ ಬಳಸಿ. ಬ್ಯಾಂಕ್ ಬಳಕೆಗಾಗಿ ವಾರಕ್ಕೆ ಕನಿಷ್ಠವೆಂದರೂ 2-3 ಟ್ಯಾಂಕರ್ ನೀರನ್ನು ಖರೀದಿಸುತ್ತಿತ್ತು. ಮಳೆನೀರಿನ ಕೊಯ್ಲಿನಿಂದಾಗಿ ಮುಂಬರುವ ದಿವಸಗಳಲ್ಲಿ ಈ ಹೊರೆ ಮತ್ತು ತಲೆನೋವು ಇನ್ನಷ್ಟು ಕಡಿಮೆಯಾಗಲಿದೆ.' - ಎಂದು ಬ್ಯಾಂಕಿನ ಅಸಿಸ್ಟಾಂಟ್ ಜನರಲ್ ಮ್ಯಾನೇಜರ್ ಸಿ.ಎಂ.ತಲ್ಲೂರು ಹೇಳಿದರು. ಮಳೆಕೊಯ್ಲಿನ ಈ ಘಟಕ ತಲ್ಲೂರು ಅವರ ಮಿದುಳ ಮರಿ.Home › Unlabelled › ಎಸ್.ಬಿ.ಐ. - ಮಳೆಕೊಯ್ಲು
Thursday, July 2, 2009
ಎಸ್.ಬಿ.ಐ. - ಮಳೆಕೊಯ್ಲು
ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಕಚೇರಿಯ ಸೂರಿನ ನೀರನ್ನು ಹಿಡಿದಿಡಲು 'ಮಳೆನೀರಿನ ಕೊಯ್ಲು' ಘಟಕ ಸ್ಥಾಪಿಸಿದೆ. ಜುಲಾಯಿ 1ರಂದು 'ಸ್ಟೇಟ್ ಬ್ಯಾಂಕ್ ಡೇ'ಯಂದು ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಘಟಕಕ್ಕೆ ನೀರನ್ನು ಎರೆಯುವುದರ ಮೂಲಕ ಶುಭಾರಂಭಗೊಳಿಸಿದರು. 'ಗ್ರೀನ್ ಬ್ಯಾಂಕಿಂಗ್ ಪ್ರಾಕ್ಟೀಸ್'ನಡಿ ಈ ಘಟಕ ಆರಂಭಗೊಂಡಿದೆ. ಬ್ಯಾಂಕಿನ ವರಿಷ್ಠ ಗಣೇಶ ಭಟ್ ಶುಭಾಶಂಸನೆ ಮಾಡಿದರು. ಬ್ಯಾಂಕಿನ ಬಹುತೇಕ ಆಸಕ್ತ ಸಿಬ್ಬಂದಿಗಳ ಉಪಸ್ಥಿತಿ. 'ನೀರನ್ನು ತುಪ್ಪದ ಹಾಗೆ ಬಳಸಿ. ಬ್ಯಾಂಕ್ ಬಳಕೆಗಾಗಿ ವಾರಕ್ಕೆ ಕನಿಷ್ಠವೆಂದರೂ 2-3 ಟ್ಯಾಂಕರ್ ನೀರನ್ನು ಖರೀದಿಸುತ್ತಿತ್ತು. ಮಳೆನೀರಿನ ಕೊಯ್ಲಿನಿಂದಾಗಿ ಮುಂಬರುವ ದಿವಸಗಳಲ್ಲಿ ಈ ಹೊರೆ ಮತ್ತು ತಲೆನೋವು ಇನ್ನಷ್ಟು ಕಡಿಮೆಯಾಗಲಿದೆ.' - ಎಂದು ಬ್ಯಾಂಕಿನ ಅಸಿಸ್ಟಾಂಟ್ ಜನರಲ್ ಮ್ಯಾನೇಜರ್ ಸಿ.ಎಂ.ತಲ್ಲೂರು ಹೇಳಿದರು. ಮಳೆಕೊಯ್ಲಿನ ಈ ಘಟಕ ತಲ್ಲೂರು ಅವರ ಮಿದುಳ ಮರಿ.






1 comments:
mr. tallur
you have done
great work
in the great
city of mangalore.
best of luck.
harini
Post a Comment