Tuesday, November 6, 2012

ಕೃಷಿ ಯಂತ್ರ ಮೇಳ ಸಂಪನ್ನ

                 ನವೆಂಬರ್ 4ರಂದು ಕೃಷಿ ಯಂತ್ರಮೇಳಕ್ಕೆ ತೆರೆ. ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ. ’'2015ರೊಳಗೆ ಅಂತಾರಾಷ್ಟ್ರೀಯ ಮಟ್ಟದ ಕೃಷಿ ಯಂತ್ರ ಮೇಳದ ಆಯೋಜಿಸುವ ಘೋಷಣೆ. ಇಂಜಿನಿಯರಿಂಗ ಕಾಲೇಜಿನ ವಿದ್ಯಾರ್ಥಿಗಳ ಅನುಶೋಧನೆ, ಕೃಷಿಕ ಆವಿಷ್ಕಾರಗಳಿಗೆ 'ಅರ್ಜಿ ಆಹ್ವಾನಿಸದೆ' ಪ್ರಶಸ್ತಿ ನೀಡಿಕೆ' ಕೋಂಕೋಡಿಯವರ ಭಾಷಣದ ಮುಖ್ಯಾಂಶ.
                ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಾ, 'ಸರಕಾರವು ಕೃಷಿ ಆವಿಷ್ಕಾರ-ಸಂಶೋಧನೆಗಳಿಗೆ ಬೆಂಬಲ, ಸಹಕಾರಕ್ಕೆ ಪ್ರಯತ್ನಿಸಬೇಕು. ಕೃಷಿ ಕ್ಷೇತ್ರ ಬಲವರ್ಧನೆಯಾಗಿ ಲಾಭದಾಯಕ ಎಂಬ ಭಾವನೆ ಯುವಕರಲ್ಲಿ ಬರಬೇಕು. ಈ ನಿಟ್ಟಿನಲ್ಲಿ ಯಂತ್ರ ಮೇಳವು ಯುವಕರಿಗೆ ಕೃಷಿಯತ್ತ ಒಲವು ತೋರಿಸಲು ದಾರಿ' ಎಂದರು.
          ಕಾಸರಗೋಡು ಸಂಸದ ಪಿ.ಕರುಣಾಕರನ್, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಬಲರಾಮ ಆಚಾರ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಇ.ಶಿವಪ್ರಸಾದ್ , ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ರಾಧಾಕೃಷ್ಣ ಭಕ್ತ, ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಮೂರೂ ದಿವಸ ಸುಮಾರು ಅರುವತ್ತು ಸಾವಿರ ಮಂದಿಯಿಂದ ಮೇಳದ ವೀಕ್ಷಣೆ.

0 comments:

Post a Comment