Tuesday, November 6, 2012

ಅಡಿಕೆ ಪತ್ರಿಕೆ ವಿಶೇಷಾಂಕ ಬಿಡುಗಡೆ

ಕೃಷಿಕರೇ ರೂಪಿಸುವ ಕೃಷಿಕರಪರ ಮಾಧ್ಯಮ 'ಅಡಿಕೆ ಪತ್ರಿಕೆ'ಗೆ ಇಪ್ಪತ್ತನಾಲ್ಕು ವರುಷ ತುಂಬಿ ಇಪ್ಪತ್ತೈದರ ರಜತ ಬೆಳಕಿಗೆ ಮೈಯೊಡ್ಡಿದೆ. ಇದರ ಸವಿ ನೆನಪಿಗಾಗಿ ನವೆಂಬರ್ ತಿಂಗಳ ಪತ್ರಿಕೆಯು 'ವಿಶೇಷಾಂಕ'ವಾಗಿ ಮೂಡಿಬಂದಿದೆ. ಯಂತ್ರ ಮೇಳದ ಉದ್ಘಾಟನೆಯಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರು ವಿಶೇಷಾಂಕವನ್ನು ಬಿಡುಗಡೆಗೊಳಿಸಿ, ಅಡಿಕೆ ಪತ್ರಿಕೆಯ ಸಾಧನೆಯನ್ನು ಶ್ಲಾಘಿಸಿದರು. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಪಡಾರು ರಾಮಕೃಷ್ಣ ಶಾಸ್ತ್ರಿ, ಶ್ರೀ ಪಡ್ರೆ, ಶಂಕರ್ ಸಾರಡ್ಕ, ವಿ.ಮ.ಭಟ್, ಕಿನಿಲ ಅಶೋಕ ಉಪಸ್ಥಿತರಿದ್ದರು.

0 comments:

Post a Comment