Monday, June 1, 2009

ಬಿಳಿಗೆರೆ 'ಎಳನೀರು ಮೇಳ'


ಹಲಸು ಮೇಳ, ಮಿಡಿಮಾವು ಮೇಳ, ಕೃಷಿ ಮೇಳ... ಈಗ ಎಳನೀರಿನ ಸರದಿ. ತಿಪಟೂರು ಸನಿಹದ ಬೆಳಿಗೆರೆಯಲ್ಲಿ ಮೇ ತಿಂಗಳಾಂತ್ಯಕ್ಕೆ ಎರಡು ದಿವಸದ ಎಳನೀರು ಮೇಳ ನಡೆದಿತ್ತು. ಬಿಳಿಗೆರೆ ಕೃಷ್ಣಮೂರ್ತಿ ಮತ್ತು ಬಳಗದ ಸಾರಥ್ಯ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ ಮತ್ತು ಮೀಯಪದವಿನ ಡಾ.ಚಂದ್ರಶೇಖರ ಚೌಟ ಎರಡೂ ದಿವಸಗಳಲ್ಲಿ ತಿಳಿಸಿದ ವಿಚಾರಗಳು ಒಂದೇ, ಎರಡೇ! ಎಳನೀರಿನ ಸಾಧ್ಯತೆಗಳನ್ನು ಪಡ್ರೆ ತೆರೆದಿಟ್ಟರೆ, ಚೌಟರು ಎಳನೀರು ಮಾರಾಟದ ಸುತ್ತ ಮಾತನಾಡಿದರು. ಪ್ರಶ್ನೆಗಳ ಮೊನಚಿಗೆ ಇಬ್ಬರಲ್ಲೂ ಹರಿತ ಉತ್ತರವಿತ್ತು. ಕೃಷ್ಣಮೂರ್ತಿಯವರಿಂದ ಆಗಾಗ್ಗೆ ಇಂಜಕ್ಷನ್! ಪ್ರಚಾರದಷ್ಟು ಜನ ಸೇರಿಲ್ಲವಾದರೂ, ಬಂದಷ್ಟು ಜನ ಎಳನೀರು ಪ್ರಿಯರೇ. 'ಎಳನೀರು ಕೊಯ್ದು ಕುಡಿಯುವುದೋ, ಮಾರುವುದೋ ಇಲ್ಲಿಯವರಿಗೆ ಗೊತ್ತೇ ಇಲ್ಲ. ಏನಿದ್ದರೂ ಕೊಬ್ಬರಿ..ಕೊಬ್ಬರಿ. ಎಳನೀರು ಮಾರಾಟಕ್ಕೆ ಯಾವ ಸಮಸ್ಯೆಯೂ ಇಲ್ಲ. ಆದರೆ ಮನಸ್ಸಿಗೆ ಚಿಕಿತ್ಸೆಯಾಗಬೇಕು' ತಮ್ಮೂರಿನ ಸ್ಥಿತಿಯನ್ನು ಕೃಷ್ಣಮೂರ್ತಿಯವರು ಖಾರವಾಗಿ ಹೇಳುತ್ತಾರೆ. 'ಮೇಳದಲ್ಲಿ ಎಳನೀರು ಕುಡಿಯುವವರು ಇದ್ದಾರೆ, ಮಾರುವವರು ಯಾಕಿಲ್ಲ' ಎಂಬ ಚೋದ್ಯಕ್ಕೆ ಮೇಳಾಂತ್ಯಕ್ಕೆ ಉತ್ತರ ಸಿಕ್ಕಿತ್ತು!

0 comments:

Post a Comment