Saturday, June 13, 2009

ತವರೂರು ಸೇರಿದ ಕೆನ್ ಲವ್

ಸುಮಾರು ಒಂದು ತಿಂಗಳ ಭಾರತ ಪ್ರವಾಸದ ಬಳಿಕ ಹವಾಯಿಯ ಕೃಷಿಕ ಕೆನ್ ಲವ್ ತವರೂರು ಸೇರಿದ್ದಾರೆ. ಕೇರಳದ ವಯನಾಡಿನ ಉರವಿನಲ್ಲಿ ಜರುಗಿದ ಹಲಸು ಮೇಳವನ್ನು ಕೆನ್ ಉದ್ಘಾಟಿಸಿದ್ದರು. ಎರಡು ದಿವಸದ ಮೇಳದಲ್ಲಿ ಕೆನ್ ಅವರೇ ಹೀರೋ! ಅಲ್ಲಿನ ಮಾಧ್ಯಮಗಳಲ್ಲಿ ಕೆನ್ ಅವರದ್ದೇ ಸುದ್ದಿ. ಜೂನ್ 2ರಂದು ಪುತ್ತೂರಿಗೂ ಬಂದಿದ್ದರು. ಸಮೃದ್ಧಿ ಆಯೋಜಿಸಿದ 'ಮುಖಾಮುಖಿ'ಯಲ್ಲಿ ಭಾಗವಸಿದ್ದರು. ಕೃಷಿಕರ ತೋಟಗಳಿಗೂ ಭೇಟಿ ನೀಡಿದ್ದರು ಎರಡ್ಮೂರು ವಾಹಿನಿ ಪ್ರತಿನಿಧಿಗಳು ಕೆನ್ ಅವರ ವಿಶೇಷ ಸಂದರ್ಶನ, ಕ್ಷೇತ್ರ ಭೇಟಿಗಳನ್ನು ದಾಖಲಿಸಿಕೊಂಡಿರುವುದು ಸಂತೋಷದ ವಿಚಾರ. ಇಲ್ಲಿನ ಹಳ್ಳಿ ಜೀವನವನ್ನು ಬಹಳಷ್ಟು ಇಷ್ಟಪಟ್ಟ ಕೆನ್ ಅವರು ಹೇಳಿದ್ದೇನು ಗೊತ್ತೇ - 'ಹವಾಯಿಯ ಮಾಧ್ಯಮಗಳು ಭಾರತವನ್ನು ಬಹಳ ಕೆಟ್ಟದಾಗಿ ನೋಡುತ್ತಿವೆ, ಬರೆಯುತ್ತಿವೆ. ಬಡ ರಾಷ್ಟ್ರ, ಅಶಿಕ್ಷಿತರು ಅಂತ ಹೇಳುತ್ತಿವೆ. ಆದರೆ ಇಲ್ಲಿನ ಚಿತ್ರಣವೇ ಬೇರೆ'. ಬಹುಶಃ ಉಳಿದ ರಾಷ್ಟ್ರದ ಕತೆಯೂ ಒಂದೇ. ಇರಲಿ, ಕೆನ್ ಮತ್ತೊಮ್ಮೆ ಬರಲಿದ್ದಾರೆ, ಇದೇ ಅಕ್ಟೋಬರ್ನಲ್ಲಿ.

0 comments:

Post a Comment