

ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ' ಮತ್ತು ಅಡಿಕೆ ಪತ್ರಿಕೆ ಜಂಟಿಯಾಗಿ ಸಮಾರಂಭವನ್ನು ಸಂಯೋಜಿಸಿತ್ತು. ದೂರದ ಗದಗಿನಿಂದ ಆರ್.ಎಸ್.ಪಾಟೀಲ್, ಶಿರಸಿಯಿಂದ ಬಾಲಚಂದ್ರ ಹೆಗಡೆ ಸಾಯಿಮನೆಯವರನ್ನು ಕೆನ್ ಆಕರ್ಶಿದ್ದರು.
ಕೇರಳದ ಪತ್ತನಾಂತಿಟ್ಟದಲ್ಲಿ ಕಳೆದ ವಾರ ಜರುಗಿದ ಹಲಸು ಮೇಳದಿಂದ ಶ್ರೀ ಪಡ್ರೆಯವರು ತಂದ ಹಲಸಿನ ವಿವಿಧ ಮೌಲ್ಯವವರ್ಧಿತ ಉತ್ಪನ್ನಗಳ ಪ್ರದರ್ಶನ. ಕಿನಿಲ ಅಶೋಕರಿಂದ ಕೆನ್ ಅವರಿಗೆ 'ಖರ್ಜೂರ ತಾಂಬೂಲ' ಉಡುಗೊರೆ.
ಹಿರಿಯ ಕೃಷಿಕ ಸಮೃದ್ಧಿಯ ಮಾಜಿ ಅಧ್ಯಕ್ಷ ಡಾ.ಕೆ.ಎಸ್.ಕಾಮತ್ರ ಹಿರಿತನದಲ್ಲಿ ಸಭಾಕಲಾಪ. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ರಿಂದ ಶುಭಾಶಂಸನೆ. ಅಡಿಕೆ ಪತ್ರಿಕೆಯ ಕಾ. ಸಂಪಾದಕ ಶ್ರೀ ಪಡ್ರೆಯವರಿಂದ ಇಡೀ ಕಾರ್ಯಕ್ರಮದ ಸಾರಥ್ಯ. ಸಮೃದ್ಧಿ ಅಧ್ಯಕ್ಷ ಮೋಹನ ಪ್ರಭು ವೇದಿಕೆಯಲ್ಲಿ ಉಪಸ್ಥಿತಿ. ಎ.ಪಿ.ಸದಾಶಿವ ಮರಿಕೆಯವರಿಂದ ವಂದನೆ. ಶಿವಸುಬ್ರಹ್ಮಣ್ಯರಿಂದ ನಿರ್ವಹಣೆ.
ಅಪರಾಹ್ನ ಕೃಷಿಕ ಸೇಡಿಯಾಪು ಜನಾರ್ದನ ಭಟ್ಟರ ತೋಟಕ್ಕೆ ಕೆನ್ ಭೇಟಿ. ಶ್ರೀ ಪಡ್ರೆ, ಮಂಚಿ ಶ್ರೀನಿವಾಸ ಆಚಾರ್, ಆರ್.ಎಸ್.ಪಾಟೀಲ, ಬಾಲು ಹೆಗಡೆ.. ಹೆಗಲೆಣೆ. ವಿಶ್ವಪ್ರಸಾದ್ ಸೇಡಿಯಾಪು ಮತ್ತು ಕುಟುಂಬದ ಸದಸ್ಯರೆಲ್ಲರ ಆತ್ಮೀಯ ಆತಿಥ್ಯ.
ನಾಳೆ ಕೆನ್ ಲವ್ ಮೂಡಬಿದಿರಿಯ ಡಾ.ಎಲ್.ಸಿ.ಸೋನ್ಸ್ ಹಣ್ಣಿನ ತೋಟಕ್ಕೆ!
2 comments:
ಮುಖತಃ ಭೇಟಿ ಸಾಧ್ಯವಾಗದೇ ಹೋದರೂ, ಬ್ಲಾಗ್ ಮೂಲಕ ಕೆನ್ ಲವ್ ಅವರನ್ನು ಭೇಟಿ ಮಾಡಿಸಿದ್ದಕ್ಕೆ ಧನ್ಯವಾದಗಳು.
- ಆನಂದತೀರ್ಥ ಪ್ಯಾಟಿ, ಗುಲ್ಬರ್ಗ
Very nice Programme
Post a Comment