Thursday, December 29, 2011

ಇಡ್ಲಿ ಮಾತ್ರ ಕೊಡ್ತೀರಿ ..ಸಾಂಬಾರು ಬೇಡವೇ ? - ಶ್ರೀ ಸುಭಾಶ್ ಪಾಳೇಕರ್



ದಶಂಬರ ೨೭-೩೦ರ ತನಕ ಕಾಸರಗೋಡಿನಲ್ಲಿ ಶೂನ್ಯ ಬಂಡವಾಳ ತರಬೇತಿ ಶಿಬಿರ. ಶ್ರೀ ಸುಭಾಶ್ ಪಾಳೇಕ ಸಾರಥ್ಯ. ಉತ್ತರ ಭಾರತದ ಇಬ್ಬರು ಕೃಷಿಕರ ಸಾಥ್.

ಈ ಸಂದರ್ಭದಲ್ಲಿ ಪೆರ್ಲ ಸಮೀಪದ ವಿಶ್ವದ ಏಕೈಕ 'ಕಾಸರಗೋಡು ಗೋ ತಳಿ ಸಂವರ್ಧನಾ ಕೇಂದ್ರ’ವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಗೆ ಪಾಳೇಕರ್ ಭೇಟಿ ಇತ್ತರು. ಅನಂತರ ಅಡಿಕೆ ಹಾಗೂ ಮಿಶ್ರ ಬೆಳೆಯಲ್ಲಿ ಶ್ರೀ ಸುಭಾಶ್ ಪಾಳೇಕರ್ ಪದ್ಧತಿ ಅಳವಡಿಸಿ ಯಶಸ್ಸು ಗಳಿಸಿದ ಕೃಷಿಕರಾದ ಶ್ರೀ ಸರ್ಪಮಲೆ ಜಯರಾಂ ಗೋಪಾಲರ ಕೃಷಿ ಕ್ಷೇತ್ರ ಸಂದರ್ಶನ ಮಾಡಿದರು. ಈ ಸಂದರ್ಭದಲ್ಲಿ ನಡೆದ ಕಿರು ಮಾತುಕತೆ.

* ಅಡಿಕೆ ಕೃಷಿಯಲ್ಲಿ ಹಾಗೂ ಉಪಬೆಳೆಗಳಲ್ಲಿ ನಿಮ್ಮ ಪದ್ದತಿಯನ್ನು ಹೇಗೆ ಅಳವಡಿಸಲು ಸಾಧ್ಯ ?
ಪಾಳೇಕರ್ : ''ಕೃಷಿಯಲ್ಲಿ ಉತ್ಪತ್ತಿ ನೀಡುವುದು ಮರಗಳಲ್ಲ -ಮಣ್ಣು .ಆಯಾಯ ಪ್ರದ್ವ್ಶದ ಮಣ್ಣಿನಲ್ಲಿ ಇಂಗಾಲ [carbon] ಮತ್ತು ಸಾರಜನಕದ ಪ್ರಮಾಣ ಹದಗೆಟ್ಟಾಗ ಫಸಲು ಇಳಿಮುಖ ವಾಗುತ್ತದೆ .ಕೇವಲ ಇಡ್ಲಿ ಮಾತ್ರ ನೀಡಿ ಸಾಂಬಾರು ನೀಡದಿದ್ದರೆ ಹೇಗೆ? ಮಣ್ಣಿನಲ್ಲಿ ಈ ಕೆಲಸವನ್ನು ಸೂಕ್ಷ್ಮ ಜೀವಾಣುಗಳು ಮಾಡುತ್ತವೆ .ಇಲ್ಲಿನ ಭೂ ಪ್ರಕೃತಿಯ ಏರು ಪೆರು, ಅತೀವ ಮಳೆ ಸಾರಜನಕವನ್ನು ಇರಗೊಡುದಿಲ್ಲ .ಹ್ಯುಮಾಸ್ ಅಂಶವೇ ಇಲ್ಲ .ತತ್ವಶ ಶೂನ್ಯ ಬಂಡವಾಳ ಪದ್ಧತಿ ಅಳವಡಿಸಿದರೆ ಅದ್ಭುತ ಪಲಿತಾಂಶ ಬಂದೇ ಬರುತ್ತದೆ''

* ಐದು ದಿನಗಳ ಸುಧೀರ್ಘ ತರಬೇತಿಗಿಂತ ಕಿರು ಅವದಿಯ ತರಬೇತಿ ಸಾಲದೇ ?
''ನೋಡಿ ,ಅರ್ಧಂಬರ್ದ ಜ್ಞಾನದಿಂದ ಏನನ್ನು ಸಾಧಿಸಲಾಗುವುದಿಲ್ಲ. ಇವತ್ತು ಮೆಕಾನಿಕಲ್ ಎಂಜಿನಯಾರ್ಗೆ ನಟ್ಟು-ಬೋಲ್ಟು ಕೆಟ್ಟು ಹೋದರೆ ಪುನಹ ಜೋಡಿಸಲು ತಿಳಿಯದು ..ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಅಲ್ಪ ಜ್ಞಾನ ನೀಡುತ್ತವೆ .ಪರಿಪೂರ್ಣತೆ ಇಲ್ಲದಿದ್ದರೆ ಅಳವಡಿಸುವಾಗ ಗೊಂದಲ ಉಂಟಾಗುತ್ತದೆ '.

ಡಾ .ವೈ ವಿ .ಕೃಷ್ಣಮೂರ್ತಿ ,ಬದಿಯಡ್ಕ ಹಾಗೂ ಸುಬ್ರಮಣ್ಯ ಪ್ರಸಾದ್ ನೆಕ್ಕರೆಕಳೆಯ ಇವರು ಕ್ಕ್ಷೇತ್ರ ಸಂದರ್ಶನ ಸಂಯೋಜಿಸಿದ್ದರು .

ಸಂದರ್ಶನ / ಚಿತ್ರ : ಚಂದ್ರಶೇಖರ್ ಏತಡ್ಕ


0 comments:

Post a Comment