Monday, July 29, 2013

ಹಿರಿಯ ಕೃಷಿಕ, ದಾನಿ - ಪಡಾರು ನರಸಿಂಹ ಶಾಸ್ತ್ರಿ ನಿಧನ


                  ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಲಕ್ಕಪ್ಪಕೋಡಿಯಲ್ಲಿ ವಾಸ್ತವ್ಯವಿರುವ ಹಿರಿಯ ಕೃಷಿಕ ಪಡಾರು ನರಸಿಂಹ ಶಾಸ್ತ್ರಿಯವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 26ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಎಪ್ಪತ್ತೊಂಭತ್ತು ವರ್ಷ ವಯಸ್ಸಾಗಿತ್ತು.
                 ನರಸಿಂಹ ಶಾಸ್ತ್ರಿಯವರು ಪ್ರಗತಿಪರ ಕೃಷಿಕರು. ಮಾಣಿಯ ಶ್ರೀ ರಾಮಚಂದ್ರಾಪುರ ಮಠದ ಮಾಣಿಶಾಖೆಯಲ್ಲಿರುವ ವೇದಪಾಠ ಶಾಲೆಯ ನೂತನ ಕಟ್ಟಡದ ರೂವಾರಿಯಿವರು. ಹವ್ಯಕ ಸಭಾಭವನ, ಗೋಶಾಲೆ, ಮೂಲ ಮಠಕ್ಕೆ ಆರ್ಥಿಕ ದೇಣಿಗೆಯನ್ನು ನೀಡಿದ ಕೊಡುಗೈ ದಾನಿ.
                  ನರಸಿಂಹ ಶಾಸ್ತ್ರಿಗಳು ಯಕ್ಷಗಾನ ಅಭಿಮಾನಿ, ವಿಮರ್ಶಕ. ಉಡುಪಿಯ ಯಕ್ಷಗಾನ ಕಲಾರಂಗದ ಪೋಷಕರು. ಕಲಾರಂಗದಲ್ಲಿ 'ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದರು. ಇದರ ಮೂಲಕ ವರುಷಕ್ಕೊಬ್ಬ ಕಲಾವಿರಿಗೆ ಪ್ರಶಸ್ತಿ ಪ್ರದಾನ.
                   ಕಳೆದ ಐದು ದಶಕದೀಚೆಗೆ ಅಡಿಕೆ, ತೆಂಗು, ಕೊಕ್ಕೊ.. ಕೃಷಿಯಲ್ಲಿ ಹೊಸ ಆವಿಷ್ಕಾರ, ಹೊಸ ವಿಚಾರಗಳತ್ತ ನಿತ್ಯ ಆಸಕ್ತಿ. ಇದನ್ನು ತಮ್ಮ ತೋಟದಲ್ಲಿ ಅಳವಡಿಸುವತ್ತ ಕುತೂಹಲಿ. ಕೃಷಿಯ ಸೂಕ್ಷ್ಮ ವಿಚಾರಗಳನ್ನು ಅನುಭವಾಧಾರದಿಂದ ಹೇಳುವ ಸಂಪನ್ಮೂಲ ವ್ಯಕ್ತಿ. ಎಳೆವಯಸ್ಸಿನಿಂದಲೇ ಸಾಹಿತ್ಯಪ್ರೀತಿ.
                  ನರಸಿಂಹ ಶಾಸ್ತ್ರಿಯವರು ಪತ್ನಿ ಸಾವಿತ್ರಿ, ಪುತ್ರ ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

0 comments:

Post a Comment