Wednesday, October 17, 2012

'ಯಂತ್ರ ಮೇಳ' ಚಪ್ಪರ ಮುಹೂರ್ತ

             ಕ್ಯಾಂಪ್ಕೋ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ನವೆಂಬರ್ 2 ರಿಂದ 4ರ ತನಕ ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ 'ಯಂತ್ರ ಮೇಳ 2-2012' (Yanthra Mela - 2 - 2012) ) ನಡೆಯಲಿದೆ. ಪುತ್ತೂರಿನ ವಿವೇಕಾನಂದ ತಾಂತ್ರಿಕ ಕಾಲೇಜು ಸಹಯೋಗ.

          13 ಶನಿವಾರ 2012ರಂದು ಮೇಳಕ್ಕೆ ವೇಗದ ಚಾಲನೆ ಮತ್ತು ವ್ಯವಸ್ಥೆಯ ಬೀಸುಹೆಜ್ಜೆಗೆ ಸಹಕಾರಿಯಾಗಲು 'ಚಪ್ಪರ ಮುಹೂರ್ತ' ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಡಾ.ಪ್ರಭಾಕರ ಭಟ್ ಕಲ್ಲಡ್ಕ ದೀಪಜ್ವಲನದ ಮೂಲಕ ಉದ್ಘಾಟಿಸಿ, 'ಹಳ್ಳಿ ಮತ್ತು ಕೃಷಿಗೆ ವಿಶೇಷ ಮಹತ್ತನ್ನು ನೀಡುವ ಮೂಲಕ ಹಿರಿಯ ಕಲ್ಪನೆಯನ್ನು ಸಾಕಾಗೊಳಿಸುವಲ್ಲಿ ಯಂತ್ರ ಮೇಳವೊಂದು ಮಹತ್ವದ ಮೈಲುಗಲ್ಲು' ಎಂದರು.

          ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ; ನಿರ್ದೇಶಕರಾದ ಸಂಜೀವ ಮಠಂದೂರು, ಡಿ.ಬಿ.ಬಾಲಕೃಷ್ಣ, ಚನಿಲ ತಿಮ್ಮಪ್ಪ ಶೆಟ್ಟಿ, ವಿದ್ಯಾವರ್ಧಕ ಸಂಘದ ಶಿವಪ್ರಸಾದ್, ಪ್ರಾಂಶುಪಾಲ ಅಶೋಕ್ ಕುಮಾರ್ ಉಪಸ್ಥಿತಿ.

          ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸ್ವಾಗತಿಸಿದರು. ವಿ.ತಾ.ಮ.ವಿದ್ಯಾಲಯದ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ವಂದಿಸಿದರು.

0 comments:

Post a Comment