Wednesday, October 17, 2012

ಎರಡನೇ ಕೃಷಿ ಯಂತ್ರ ಮೇಳ

              ಸಹಕಾರಿ ಸಂಸ್ಥೆ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ.) ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ 02.11.2012 ರಿಂದ 04.11.2012 ತನಕ  ಕೃಷಿ ಯಂತ್ರ ಮೇಳ - 2 - 2012 ನಡೆಯಲಿದೆ. ಒಂದು ಲಕ್ಷಕ್ಕೂ ಮಿಕ್ಕಿ ರೈತರು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ.

              ಮೇಳದ ವೈಶಿಷ್ಟ್ಯ: * ಆಧುನಿಕ ಮತ್ತು ಅತ್ಯವಶ್ಯಕ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ * ಚೀನಾ, ಇಸ್ರೇಲ್ ದೇಶಗಳ ಕೃಷಿ ಯಂತ್ರಗಳು, * ನೂತನವಾಗಿ ಆವಿಷ್ಕಾರಗೊಂಡ ಕೃಷಿ/ ತೋಟಗಾರಿಕಾ / ಗೃಹೋಪಯೋಗಿ / ಹೈನುಗಾರಿಕ ಯಂತ್ರಗಳು. * ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಆವಿಷ್ಕಾರಗೊಂಡ ಯಂತ್ರೋಪಕರಣಗಳು * ಕೃಷಿಕರು ತಯಾರಿಸಿದ ಆವಿಷ್ಕಾರಗಳು * ವೈವಿಧ್ಯಮಯ ಕೃಷಿ ವಿಚಾರ ಸಂಕಿರಣ * ಕೃಷಿಗೆ ಸಂಬಂಧಿಸಿದಂತೆ ಬ್ಯಾಂಕ್ಗಳ ಆರ್ಥಿಕ ಸೌಲಭ್ಯಗಳ ಮಾಹಿತಿ * ಕೃಷಿಕರಿಂದ ಪ್ರಶಂಸಿಸಲ್ಪಟ್ಟ ಯಂತ್ರೋಪಕರಣಗಳ ಉತ್ಪಾದನೆಗೆ ಆರ್ಥಿಕ ಸವಲತ್ತು - ಬ್ಯಾಂಕ್ಗಳ ಮೂಲಕ ನೀಡಲು ಶಿಫಾರಸು * ವಾಣಿಜ್ಯ ಮಳಿಗೆಗಳು, ಸಂಶೋಧಕರ ಮಳಿಗೆಗಳು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮಳಿಗೆಗಳನ್ನೊಳಗೊಂಡ 100 ಕ್ಕೂ ಮಿಕ್ಕಿದ ಮಳಿಗೆಗಳು. 
      
                * 02.11.2012 - ಪದ್ಮಭೂಷಣ ರಾಜಷರ್ಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ - ಇವರಿಂದ ಉದ್ಘಾಟನೆ. ಅಧ್ಯಕ್ಷತೆ : ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ. * ದಿನಾಂಕ 04.11.2012, ಅಪರಾಹ್ನ ಘಂಟೆ 2.30 - ಸಮಾರೋಪ ಸಮಾರಂಭ.

* ವಿಚಾರ ಸಂಕಿರಣ: (2-11-2012)
 1) ವಿಷಯ : ಕೃಷಿ ಯಾಂತ್ರೀಕರಣದ ಅನುಭವಗಳು. ಪ್ರಸ್ತುತಿ : ಶ್ರೀ ಈಶ್ವರ ಪ್ರಸಾದ್ ಬನಾರಿ, ಶ್ರೀ ಕೂಳೂರು ಸತ್ಯನಾರಾಯಣ
2) ವಿಷಯ : ಪಶುಪಾಲನೆ - ಯಾಂತ್ರೀಕರಣದ ಸಾಧ್ಯತೆ ಮತ್ತು ಸವಾಲುಗಳು. ಪ್ರಸ್ತುತಿ : ಕುಮಾರ್ ಹಾಸನ, ಸೀತಾರಾಮ ಹೆಗಡೆ, ನೀರ್ನಳ್ಳಿ, ಶಿರಸಿ.

* ವಿಚಾರ ಸಂಕಿರಣ: (3-11-2012)
ಬಯಲು ಪ್ರಾತ್ಯಕ್ಷಿಕೆ, ಪವರ್ ಸ್ಪ್ರೇಯರ್ಗಳು, ಸ್ಪ್ರೇಯ್ ಗನ್
ವಿಚಾರ ಪ್ರಸ್ತುತಿ : ಶ್ರೀ ಅನ್ನಪೂರ್ಣ ಏಜೆನ್ಸೀಸ್ ಚಿಕ್ಕಮಗಳೂರು, ಗೋವಿಂದ ಪ್ರಕಾಶ ಸಾಯ ಎಂಟರ್ಪ್ರೈಸಸ್ ಪುತ್ತೂರು,  ಉರಿಮಜಲು ಮೋಹನ, ವಿಟ್ಲ
* ಮಿಸ್ಟ್ ಬ್ಲೋವರ್ಗಳು
 ಶ್ರೀ ಚೀಮುಳ್ಳು ಸೀತಾರಾಮ * ರೋಪ್ ವೇ : ರಾಮ್ ಕಿಶೋರ್, ಮಂಚಿ * ತೆಂಗು ಕೊಯ್ಲು - ಶ್ರೀಮತಿ ಕೃಷ್ಣವೇಣಿ, ಕಾಸರಗೋಡು                                                                          
* ವಿಚಾರ ಸಂಕಿರಣ :
 ಕೃಷಿ ಯಾಂತ್ರೀಕರಣದಲ್ಲಿ ಹೊಸತು - ಅಳವಡಿಸುವ ಸಾಧ್ಯತೆಗಳು.
ಪ್ರಸ್ತುತಿ : ವಿಶ್ವನಾಥ ಕುಂಟುವಳ್ಳಿ, ವಿನಾಯಕ ಹೆಗಡೆ ಸಾಗರ, ಸುರೇಶ್ ಭಂಡಾರಿ ಎಂ, ಬಾಲಚಂದ್ರ ಹೆಗಡೆ ಸಾಯಿಮನೆ, ಶಿರಸಿ.
* ಜಾಬ್ ವರ್ಕರ್  ಮೂಲಕ ಯಂತ್ರ ಬಳಕೆ
ವಿಷಯ : ಹಸಿ ಅಡಿಕೆ ಸುಲಿತ -
ಪ್ರಸ್ತುತಿ : ಅಮರನಾಥ ಪಡಿಯಾರ್, ತೀರ್ಥಹಳ್ಳಿ. ಆರ್. ಎಂ. ಭಟ್, ಕಾರ್ಯದರ್ಶಿ, ಹುಳಗೋಳ ಸೊಸೈಟಿ

ವಿಷಯ : ನೀರಿನಿಂದ ವಿದ್ಯುತ್ ಉತ್ಪಾದನೆ.
ಪ್ರಸ್ತುತಿ - ಡಾ. ಅನಿಲ್ ಪ್ರಕಾಶ ಜೋಷಿ, ಡೆಹರಡೂನ್, ಉತ್ತರಾಖಂಡ, ರತ್ನಾಕರ್ ಜಯಪುರ

* ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದನೆ -
ಪ್ರಸ್ತುತಿ : ಡಾ. ಅಶೋಕ ಕುಂದಾಪುರ, ಉಡುಪಿ.
* ಕೇಂದ್ರೀಕೃತ ಅಡಿಕೆ, ಕಾಳುಮೆಣಸು, ವೆನಿಲ್ಲಾ ಮುಂತಾದ ಬೆಳೆಗಳ ಸಂಸ್ಕರಣೆ/ ಮೌಲ್ಯ ವರ್ಧನೆ -
ಕನ್ನಂಗಿ ಶೇಷಾದ್ರಿ, ತೀರ್ಥಹಳ್ಳಿ,

ವಿಚಾರ ಸಂಕಿರಣ (04-11-2012)   
                                      
ತೋಟಗಳಲ್ಲಿ ಅಂತರ್ ಸಾಗಾಟ
* ರಿಕ್ಷಾದಿಂದ ತೋಟಗಳಲ್ಲಿ ಸರಕು ಸಾಗಾಟ - 
ಶ್ರೀ ಸೀತಾರಾಮ ಭಟ್ ವಿಟ್ಲ, ಕೋಡಿಬೈಲ್ ಸತ್ಯನಾರಾಯಣ, ಪುತ್ತೂರು, ಶ್ರೀ ಗೋಪಾಲಕೃಷ್ಣ ಭಟ್ -
                                                                  
* ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೃಷಿ ಉಪಯೋಗಿ ಆವಿಷ್ಕಾರಗಳು                                                       
                                                     
ಹನಿ ನೀರಾವರಿ ಪ್ರಾಮುಖ್ಯತೆ ಮತ್ತು ರಸಗೊಬ್ಬರಗಳನ್ನು ನೀರಿನ ಮೂಲಕ ಪೂರೈಕೆ ಮಾಡುವುದು : 
ಶ್ರೀ ಶ್ರೀನಿವಾಸ್ ನಾಯ್ಕ, ವಿಜ್ಞಾನಿಗಳು, ಜೈನ್ ಇರಿಗೇಶನ್

ಆಧುನಿಕ ಸಸ್ಯ ಸಂರಕ್ಷಣಾ ಉಪಕರಣಗಳು
ಎಸ್.ವಿ.ರಂಗಸ್ವಾಮಿ ಮತ್ತು ಕಂಪನಿಯ ಪ್ರತಿನಿಧಿಗಳು (ಆಸ್ಪೀ ಉಪಕರಣಗಳ ಬಗ್ಗೆ)
(0824) 2441584

0 comments:

Post a Comment