Monday, June 28, 2021

ಇದು ಅಂತಿಮವಲ್ಲ, ಆರಂಭ

 

ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕವನ್ನು ಪ್ರಕಾಶಿಸಿದವರು ರೂರಲ್ ಮಿರರ್ ಪ್ರಕಾಶನ – ಪ್ರಕಾಶಕ ಮಹೇಶ್ ಪುಚ್ಚಪ್ಪಾಡಿ ಮಾತು....

          ಅದು ಪಾಸಿಟಿವ್ ದಿನಗಳು. ಅಂದು ಪಾಸಿಟಿವ್ ಎನ್ನುವ ಶಬ್ದವೇ  ನೆಗೆಟಿವ್ ಆಗಿತ್ತು. ಈಗ ಅದೆಲ್ಲಾ ಮರೆತುಹೋಗುವ, ಮರೆತು ಹೋಗಲೇಬೇಕಾದ ಸಮಯ ಬಂದಿದೆ. ಹಾಗೆಂದು ಆ ಸಂಕಷ್ಟದ ದಿನಗಳು ಕಣ್ಣಮುಂದೆ ಬಂದಾಗ ದಾಖಲಿಸಬೇಕಾದ ಹಲವು ಸಂಗತಿಗಳು ಕಂಡುಬಂದವು.

          ಅನೇಕ ಸಂದರ್ಭದಲ್ಲಿ ವಾಸ್ತವ ಸಂಗತಿಗಳು ದೈನಂದಿನ ಬದುಕಿನಲ್ಲಿ ಮರೆಯಾಗುತ್ತವೆ. ಅದಕ್ಕೆ ಕಾರಣಗಳು ಹಲವು. ಒಂದು ಮಾಧ್ಯಮವಾಗಿ ಇಂತಹ ಸಂಗತಿಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾಗಿದೆ.  ಕೊರೊನಾ ಸಂದರ್ಭದ ಪಾಸಿಟಿವ್ ಬದಲಾವಣೆಗಳು ಮರೆವಿಗೆ ಜಾರಬಾರದು.  ಅದಕ್ಕಾಗಿಯೇ ಮುಸ್ಸಂಜೆಯ ಹೊಂಗಿರಣದ ಪ್ರಕಾಶನಕ್ಕೆ ಮುಂದಾಗಿದ್ದೇವೆ.

          ಕೊರೊನಾ ಸಮಯದಲ್ಲಿ ಎಲ್ಲೆಡೆ ಭಯದ ವಾತಾವರಣ. ಎಲ್ಲೋ ದೂರದಲ್ಲಿ ಕೊರೊನಾ ಪಾಸಿಟಿವ್ ಕೇಳಿಬಂದರೆ ಹಳ್ಳಿಗಳಲ್ಲಿ ನಡುಕ ಆರಂಭವಾಗುತ್ತಿತ್ತು.  ಒಂದು ಪಾಸಿಟಿವ್ ಸುದ್ದಿ ತಿಳಿದರೆ ಸಾಕು ಭಯದಿಂದ ಮುಗಿಬಿದ್ದು ಓದುತ್ತಿದ್ದರು. ಭಯದ ನಡುವೆಯೇ ಬದುಕು ಸಾಗುತ್ತಿತ್ತು.

          ದೇಶದ ಆರ್ಥಿಕ ಸ್ಥಿತಿಯಿಂದ ತೊಡಗಿ ಹಳ್ಳಿಗಳಲ್ಲೂ ಆರ್ಥಿಕ, ಸಾಮಾಜಿಕ ಸ್ಥಿತಿ ಬದಲಾವಣೆ ಆರಂಭವಾದವು. ಇದು ಹಳ್ಳಿಗಳನ್ನು ಮತ್ತೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು.  ಸಣ್ಣ ಸಣ್ಣ ಬದಲಾವಣೆಗಳು ಹಳ್ಳಿಗಳಿಗೆ ಬೆಳಕಾದುವು. ಯುವಕರು ಇಲ್ಲವಾಗಿದ್ದ ಹಳ್ಳಿಗಳು ಮುಸ್ಸಂಜೆಯ ಹೊತ್ತಿನಲ್ಲಿದ್ದವು. ಇದೇ ಹೊತ್ತಿಗೆ ಸಣ್ಣ ಸಣ್ಣ ಬದಲಾವಣೆಯ ಹೊಂಗಿರಣ ಕಂಡುಬಂದಿತ್ತು. ಇದನ್ನು ದಾಖಲಿಸುತ್ತಾ ಹೋದಾಗ ಅದೊಂದು ದಾಖಲೆಯ ರೂಪಕ್ಕೆ ಬಂದಿತು. ಇದೇ ಅಂತಿಮವಲ್ಲ. ಮುಂದೆ ಅವಕಾಶ ಸಿಕ್ಕಾಗ ಮತ್ತೆ ದಾಖಲಿಸುವ ಪ್ರಯತ್ನ ಮಾಡುತ್ತೇವೆ.

          ಇದೀಗ ರೂರಲ್ ಮಿರರ್ನ ಚೊಚ್ಚಲ ಕೃತಿಯನ್ನು ನಿಮ್ಮ ಮುಂದೆ ಪಾಸಿಟಿವ್ ರೂಪದಲ್ಲಿ ಇರಿಸುತ್ತಿದ್ದೇವೆ. ಲೇಖಕ ನಾ. ಕಾರಂತ ಪೆರಾಜೆಯವರ ಶ್ರಮವನ್ನು ಗೌರವಿಸುತ್ತಾ, ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.

 - ಮಹೇಶ್ ಪುಚ್ಚಪ್ಪಾಡಿ

0 comments:

Post a Comment