Friday, May 1, 2015

ಎಸ್.ಎನ್.ಪೆಜತ್ತಾಯ ನೆನಪು

ಅನುಭವಿ ಕೃಷಿಕ ಎಸ್.ಎನ್.ಪೆಜತ್ತಾಯರು ಎಪ್ರಿಲ್ 30ರಂದು ವಿಧಿವಶರಾದರು.
ತಮ್ಮ ಹಾಸ್ಯಮಿಶ್ರಿತ ಬರೆಹ, ಮಾತುಗಳಿಂದ ಬಹುಬೇಗನೆ ಆವರಿಸಿ ಬಿಡುವಂತಹ ವ್ಯಕ್ತಿತ್ವ. ತನ್ನ ಜೀವನಾನುಭವ, ಕೃಷಿಯ ಅನುಭವಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲಿಸಿದ್ದಾರೆ. ಕೆಲವು ಪುಸ್ತಕ ರೂಪದಲ್ಲಿ ಬಂದಿವೆ. ತಾವು ಸಾಕಿನ ಮುದ್ದಿನ, ನಿಯತ್ತಿನ ನಾಯಿಯ ಕುರಿತೇ ಪುಸ್ತಕ ಬರೆದಿದ್ದರು. ಮನುಷ್ಯರಂತೆ ಪ್ರಾಣಿಗಳಿಗೂ ಮನಸ್ಸು, ಭಾವನೆಗಳಿವೆ ಎಂದು ನಂಬಿದವರು. ಮಿಂಚಂಚೆಗಳಿಗೆ ತಕ್ಷಣ ಉತ್ತರ ಕೊಡುವಂತಹ ಶಿಸ್ತು. ಬ್ಲಾಗ್, ಫೇಸ್ ಬುಕ್ಕಿನಲ್ಲಿ ತಮಗೆ ಇಷ್ಟವಾದ ಪೋಸ್ಟ್ ಗಳಿಗೆ ಕೇವಲ 'ಲೈಕ್' ಕೊಡದೆ, ಪ್ರತ್ಯುತ್ತರವನ್ನು ನೀಡುತ್ತಿದ್ದರು. ಹೆಚ್ಚು ಮಾತುಕತೆ ಬೇಕಾದರೆ ಸ್ವತಃ ಫೋನ್ ಮಾಡುತ್ತಿದ್ದರು. ಅಡಿಕೆ ಪತ್ರಿಕೆಗೆ ಒಂದಷ್ಟು ಲೇಖನಗಳನ್ನು ಬರೆದಿದ್ದರು. ನಾನವರನ್ನು ನೋಡಿಲ್ಲ, ಮುಖತಃ ಮಾತನಾಡಿಲ್ಲ. ಆದರೆ ಫೋನ್, ಮಿಂಚಂಚೆಗಳ ಮೂಲಕ ರಕ್ತಸಂಬಂಧಿಗೂ ಮಿಗಿಲಾಗಿ ಹತ್ತಿರವಾಗಿದ್ದ ಪೆಜತ್ತಾಯ ಮಾಮನನ್ನು ಹೇಗೆ ಮರೆಯಲಿ? ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಹಾರೈಕೆ.

0 comments:

Post a Comment