Friday, May 1, 2015

ಸಂಪದ ಸಾಲಿನ 'ಸಂಪಣ್ಣ'


             ಕಳೆದ ವರುಷ ಸುಳ್ಯದ ಕೇಶವ ಕೃಪಾದ ಕಾರ್ಯಕ್ರಮವೊಂದರಲ್ಲಿ ಸಂಪ ವೆಂಕಟೇಶ ಅವರೊಂದಿಗೆ ಮುಖಾಮುಖಿ. ಅದಕ್ಕಿಂತ ಮುಂಚೆ ಫೇಸ್ ಬುಕ್ಕಿನಲ್ಲಿ ಪರಿಚಯ. ಮೊದಲ ನೋಟದಲ್ಲೇ ಆವರಿಸಿ ಬಿಡುವ ಆಪ್ತತ್ವ. ನಂತರದ ದಿನಗಳಲ್ಲಿ ಆಗಾಗ್ಗೆ ದೂರವಾಣಿ ಸಂಭಾಷಣೆ. ಎಪ್ರಿಲ್ 30ರಂದು ಸಾಗರದ ಸನಿಹದ ಅವರ ಮನೆ / ಕಚೇರಿಗೆ ಹೋಗಿದ್ದೆ. ಇವರು ಸಂಪದ ಸಾಲು ಎನ್ನುವ ಪತ್ರಿಕೆಯ ಸಂಪಾದಕ. ಎಲ್ಲಕ್ಕಿಂತಲೂ ಮುಖ್ಯವಾಗಿ ಭಾವ ಜೀವಿ. ಧನಾತ್ಮಕ ಚಿಂತನೆಯ ಜವ್ವನ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ. ರಿಸಲ್ಟ್ ಓರಿಯಂಟೆಡ್ ಕೆಲಸಗಳೆಂದರೆ ಇಷ್ಟ. ಸಮಯ ಕೊಲ್ಲುವ ವಿಚಾರಗಳೆಂದರೆ ಅವರಿಗೆ ಇಷ್ಟವಿಲ್ಲ. ನಿರಂತರ ಓದು. ಹೆಗ್ಗೋಡು ಸನಿಹ ಹತ್ತೆಕ್ರೆ ಕೃಷಿ ಭೂಮಿಯ ಯಜಮಾನ. ತೋಟದ ಬೆಳವಣಿಗೆಯಲ್ಲಿ ಹತ್ತಾರು ಕನಸುಗಳು. ನನಸಿನ ಹೆಜ್ಜೆಯಲ್ಲಿ ಸಾಗುವ ಸಂಪ ಅವರಲ್ಲಿ ಸ್ಪಷ್ಟವಾದ ಮುನ್ನೋಟವಿದೆ. ದೂರದೃಷ್ಟಿಯಿದೆ. ಸಾಗಿದ ದಾರಿಯಲ್ಲಿ ಗುರುತರವಾದ ಹೆಜ್ಜೆ ಗುರುತನ್ನು ಊರಿದ 'ನಮ್ಮ ಸಂಪಣ್ಣ'ನ ಮುಂದೆ ಇನ್ನೂ ಕಾಲವಿದೆ. ಊರಲು ಹೆಜ್ಜೆಯಿದೆ. ಖಂಡಿತಾ ಊರುತ್ತಾರೆ.
             ಅವರೊಂದಿಗೆ ಮಾತನಾಡುತ್ತಿದ್ದಂತೆ ನನ್ನ ವಯಸ್ಸೂ ಹತ್ತು-ಹದಿನೈದು ವರುಷ ಹಿಂದೋಡಿತು. ಅವರ ವಯಸ್ಸಲ್ಲಿ ನಾನು ಏನೂ ಸಾಧಿಸಲಾಗದ ವ್ಯಥೆ ಕಾಡಿತು.

0 comments:

Post a Comment